December 20, 2025

10 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ವಶಕ್ಕೆ

0
n34455039416404298398567f13b467bf2891a5c18a51a07afcc7b6ed9c4f8359c132115c47602c7171631d.jpg

ಹೊಸಪೇಟೆ: ಇಲ್ಲಿನ ಪಟ್ಟಣ ಠಾಣೆ ಪೊಲೀಸರು ₹10 ಕೋಟಿ ಮೌಲ್ಯದ 10 ಕೆ.ಜಿ. ತಿಮಿಂಗಿಲ ವಾಂತಿಯನ್ನು (ಆಂಬರ್ ಗ್ರೀಸ್‌) ಶನಿವಾರ ವಶಪಡಿಸಿಕೊಂಡಿದ್ದಾರೆ.

ಡಿ. 22ರಂದು ನಗರದಲ್ಲಿ ಕೊಪ್ಪಳದ ಬಂಡಿ ಹರ್ಲಾಪುರದ ಲಂಬಾಣಿ ವೆಂಕಟೇಶ (35), ಅಬ್ದುಲ್‌ ವಹಾಬ್‌ (23) ಎಂಬುವರನ್ನು ಪೊಲೀಸರು ಬಂಧಿಸಿ, ಅವರಿಂದ ₹1.5 ಕೋಟಿ ಬೆಲೆಬಾಳುವ ಒಂದುವರೆ ಕೆ.ಜಿ. ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ದರು.

ಅವರು ನೀಡಿದ ಮಾಹಿತಿ ಮೇರೆಗೆ ಅದೇ ದಿನ ಪೊಲೀಸರು ಮುರುಡೇಶ್ವರದ ಹಿರಮನೆ ಗಣಪತಿ (42), ಹುಬ್ಬಳ್ಳಿ ಬೆಂಗೇರಿಯ ಪುಂಡಲೀಕ್ ಲಕ್ಷ್ಮಣ (34), ಮಹೇಶ ಡೊಂಗ್ರಿ (33), ವಿಜಯಪುರದ ಶ್ರೀಧರ ಹೇಮಂತ್‌ ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದರು.

ಡಿ. 24ರಂದು ಮುರುಡೇಶ್ವರದಲ್ಲಿನ ಹಿರಮನೆ ಗಣಪತಿ ಅವರ ಮನೆಯಲ್ಲಿ ಶೋಧ ನಡೆಸಿದಾಗ ಮತ್ತೆ 10 ಕೆ.ಜಿ ತಿಮಿಂಗಿಲ ವಾಂತಿ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ತಿಳಿಸಿದ್ದಾರೆ. ವನ್ಯಜೀವಿಗಳ ಸಂರಕ್ಷಣೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!