ಕಾಸರಗೋಡು: ಬಸ್ ನಿಲ್ದಾಣದೊಳಗೆ ನುಗ್ಗಿದ ಕಾರು: ಓರ್ವ ಮೃತ್ಯು
ಕಾಸರಗೋಡು: ಪುಲ್ಲೂರಿನಲ್ಲಿ ಅತೀ ವೇಗದಿಂದ ಬಂದ ಕಾರು ಬಸ್ಸು ತಂಗುದಾಣದೊಳಗೆ ನುಗ್ಗಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಪುಲ್ಲೂರು ಮಕ್ಕರಕೋಡ್ ನ ಗಂಗಾಧರ(65) ಎಂದು ಗುರುತಿಸಲಾಗಿದೆ.
ಪೆರಿಯ ಕಡೆಗೆ ತೆರಳಲು ಬಸ್ಸಿಗಾಗಿ ಕಾಯತ್ತಿದ್ದಾಗ ಅತೀ ವೇಗ್ದಿಂದ ಬಂದ ಕಾರು ನುಗ್ಗಿ ಅಪಘಾತ ನಡೆದಿದೆ.
ಈ ಬಗ್ಗೆ ಹೊಸದುರ್ಗ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




