ಉಡುಪಿ: ಗದ್ದೆಯಲ್ಲಿ ಜಿಂಕೆ ಪತ್ತೆ: ಅರಣ್ಯ ಅಧಿಕಾರಿಗಳಿಂದ ರಕ್ಷಣೆ
ಉಡುಪಿ: ಪರ್ಕಳ ಇಲ್ಲಿನ ಹೆರ್ಗದ ಗಣಪತಿ ಮಠದ ಬಳಿ ವಿಠಲ ಶೆಟ್ಟಿಯವರ ಗದ್ದೆಯಲ್ಲಿ ಜಿಂಕೆಯೊಂದು ಪತ್ತೆಯಾಗಿದೆ.
ನಾಯಿಗಳು ಅಟ್ಟಾಡಿಸಿಕೊಂಡು ಬರುವಾಗ ಈ ಜಿಂಕೆ ಅಟ್ಟಾಡಿಸಿವಿಕೆಯಿಂದ ಬೆದರಿ ವಿಠಲಶೆಟ್ಟಿಯವರ ದನದ ಕೊಟ್ಟಿಗೆಯ ಒಳಹೊಕ್ಕು ರಕ್ಷಣೆಗೆ ಮೊರೆಹೋಗಿದೆ. ಜಿಂಕೆಯ ಬಲಕಾಲಿನಲ್ಲಿ ಗಾಯವಾಗಿ ಊದಿಕೊಂಡು ರಕ್ತದ ಮಡಿವಿನಲ್ಲಿತ್ತು.
ಈ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ. ದಿವಾಕರ್ ಶೆಟ್ಟಿ ಶುಭಕರ ಶೆಟ್ಟಿ. ವಿಘ್ನೇಶ್ ಕೆದ್ಲಾಯ. ವಿಕ್ರಂ ಕೆದ್ಲಾಯ. ಅಶೋಕ್ ಶೆಟ್ಟಿ ಗುಣಪಾಲ್ ಶೆಟ್ಟಿ ಮೊದಲಾದವರು ಸಹಕರಿಸಿದರು ಈ ಜಿಂಕೆಗೆಸುಮಾರು ಮೂರ್ನಾಲ್ಕು ವರ್ಷಗಳಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿಯ ಅರಣ್ಯ ಅಧಿಕಾರಿಗಳು ಜಿಂಕೆ ಇರುವ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಸುರಕ್ಷಿತವಾಗಿ ಪಶುವೈದ್ಯ ಡಾ|ಪ್ರಶಾಂತ್ ಶೆಟ್ಟಿ ಅವರ ಸಲಹೆ ಮೇರೆಗೆ ಮಣಿಪಾಲ ಬಡಗುಗಟ್ಟಿನಲ್ಲಿರುವ ಟಿ ಪಾರ್ಕಿಗೆ ಹೆಚ್ಚಿನ ಚಿಕಿತ್ಸೆಗೆ ವರ್ಗಾಯಿಸಲಾಯಿತು.




