ಹಾಡಹಗಲೇ ಗುಂಡು ಹಾರಿಸಿ ಶಿವಸೇನೆ ನಾಯಕ ‘ಸುಧೀರ್ ಸೂರಿ’ಯ ಹತ್ಯೆ
ಪಂಜಾಬ್: ಪಂಜಾಬ್ನ ಅಮೃತಸರದಲ್ಲಿ ಶಿವಸೇನೆ ನಾಯಕ ಸುಧೀರ್ ಸೂರಿ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿರುವ ಘಟನೆ ನಗರದ ದೇವಸ್ಥಾನದ ಹೊರಭಾಗದಲ್ಲಿ ನಡೆದಿದೆ.
ಗೋಪಾಲ್ ದೇವಸ್ಥಾನದ ಬಳಿ ಮಜೀತಾ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸೂರಿ ಮೇಲೆ ಗುಂಡು ಹಾರಿಸಿದ್ದು, ಸೂರಿ ದೇವಸ್ಥಾನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ ಜನಸಮೂಹದಿಂದ ಯಾರೋ ಹೊರಬಂದು ಅವರನ್ನು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ನೀರಿಕ್ಷಿಸಲಾಗುತ್ತಿದೆ.





