ಕಡಬ: ರಸ್ತೆಯಲ್ಲಿ ಮೊಸಳೆ ಪತ್ತೆ – ಸುರಕ್ಷಿತವಾಗಿ ಕುಮಾರದಾರ ನದಿಗೆ ಬಿಟ್ಟ ಅರಣ್ಯ ಅಧಿಕಾರಿಗಳು
ಕಡಬ: ಕಡಬ ತಾಲೂಕಿನ ಅಲಂಕಾರು ಕೊಂಡಾಡಿ ಕೊಪ್ಪ ಕಿರಿಯ ಪ್ರಾಥಮಿಕ ಶಾಲೆ ಬಳಿ ರಸ್ತೆಯಲ್ಲಿ ಇಂದು ಮೊಸಳೆಯೊಂದು ಪತ್ತೆಯಾಗಿರುವ ಘಟನೆ ನಡೆದಿದೆ.
ಶಾಲೆಯ ಬಳಿ ರಸ್ತೆ ದಾಟುತ್ತಿದ್ದ ಸಂಧರ್ಭ ಸ್ಥಳೀಯರು ಗಮನಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಬಾಲಚಂದ್ರ ಗೌಡ, ಮತ್ತು ರವಿ ಕುಮಾರ್ ತಕ್ಷಣ ಸ್ಥಳಕ್ಕೆ ಆಗಮಿಸಿದ್ದು ಸ್ಥಳೀಯರೊಂಗಿದೆ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಹಿಡಿದು ಸುರಕ್ಷಿತವಾಗಿ ಕುಮಾರದಾರ ನದಿಗೆ ಬಿಟ್ಟಿದ್ದಾರೆ.





