December 20, 2025

ರೈಲಿನಲ್ಲಿ ಕಳ್ಳತನ:
ಆರೋಪಿ ಸುಳ್ಯದ ಯುವಕನ ಬಂಧನ

0
IMG-20211225-WA0069.jpg

ಮಂಗಳೂರು: ಮಂಗಳೂರು – ಬೆಂಗಳೂರು ರೈಲಿನಲ್ಲಿ ಸಂಚರಿಸುತ್ತಿರುವ ಯಾತ್ರಿಕರ ಮೊಬೈಲ್ ಫೋನ್, ಲೇಡೀಸ್ ಬ್ಯಾಗ್ ಕಳವುಗೈಯುತ್ತಿದ್ದ ಆರೋಪಿ ಸುಳ್ಯದ ಯುವಕನನ್ನು ಪೋಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

ಮಂಗಳೂರು – ಬೆಂಗಳೂರು ಸಂಚರಿಸುವ ರೈಲಿನಿಂದ ಸತತವಾಗಿ ಕಳವುಗೈಯುತ್ತಿದ್ದ ಅರೋಪಿ ಸುಳ್ಯ ನಗರದ ಕಲ್ಲುಮುಟ್ಲು ನಿವಾಸಿ 19 ವರ್ಷದ ಯುವಕ ಅಬ್ದುಲ್ ಅಜೀಜ್ ಎಂಬುವನನ್ನು ಮಂಗಳೂರು ರೈಲ್ವೆ ಪೊಲೀಸರು ಬಂದಿಸಿರುವುದಾಗಿ ತಿಳಿದುಬಂದಿದೆ.

ಈತ ನಿರಂತರ ಮಂಗಳೂರು ಬೆಂಗಳೂರು ರೈಲ್ವೆಯಲ್ಲಿ ಸಂಚರಿಸುತ್ತಿದ್ದು ಯಾತ್ರಿಕರು ನಿದ್ರೆಯಲ್ಲಿರುವ ಸಂದರ್ಭದಲ್ಲಿ ಕಳವುಗೈಯುತ್ತಿದ್ದ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.
ಕಳುವು ಆರೋಪಿಯಿಂದ ಸುಮಾರು 11 ಮೊಬೈಲ್ ಫೋನ್, ಒಂದು ಟ್ಯಾಬ್‌, ಒಂದು ವ್ಯಾನಿಟಿ ಬ್ಯಾಗ್, ಪಾಸ್ ಪೋರ್ಟ್ ದಾಖಲೆಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!