ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ: ಮೂವರು ದಾರುಣವಾಗಿ ಸಾವು
ಯಾದಗಿರಿ: ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಭೀಕರ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಕಕ್ಕೇರಾ ಕ್ರಾಸ್ ಹತ್ತಿರ ಬಳಿ ರವಿವಾರ ರಾತ್ರಿ (ಡಿ.25) ರಂದು ನಡೆದಿದೆ.
ಕೋಟೆಗುಡ್ಡದ ಗ್ರಾಮದ ಕುರಿಗಾಹಿಗಳಾದ ಬಾಲಪ್ಪ ( 55),ಜಟ್ಟೆಪ್ಪ ( 60 ) ಹಾಗೂ ಕೊಡೇಕಲ್ ಗ್ರಾಮದ ತರಕಾರಿ ವ್ಯಾಪಾರಿಯಾದ ಪರಸಪ್ಪ (45) ಸಾವನ್ನಪ್ಪಿದ್ದಾರೆ.
ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




