ಮದುವೆಯಾಗಲು ನಿರಾಕರಿಸಿದ ಯುವತಿಯ ಹತ್ಯೆ: ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ
ದಾವಣಗೆರೆ: ಮದುವೆಯಾಗಲು ನಿರಾಕರಿಸಿದ್ದರಿಂದ ಕುಪಿತಗೊಂಡು ಅತ್ಯಂತ ಬರ್ಬರವಾಗಿ ಯುವತಿಯ ಹತ್ಯೆ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಶುಕ್ರವಾರ ಸಾವನ್ನಪಿದ್ದಾನೆ.
ಯುವತಿಯ ಕೊಲೆ ಮಾಡಿ ವಿಷ ಸೇವಿಸಿದ್ದ ಹರಿಹರ ಮೂಲದ ಸಾದತ್ ಮೃತಪಟ್ವವನು.
ಗುರುವಾರ ಚರ್ಚ್ ರಸ್ತೆಯಲ್ಲಿ ಚಾಂದ್ ಸುಲ್ತಾನ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಸಾದತ್ ಕೊಲೆ ಮಾಡಿ, ಪರಾರಿಯಾಗಿದ್ದನು. ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.




