September 8, 2024

ಕಾಸರಗೋಡು: ಮೀನು ಹಿಡಿಯುತ್ತಿದ್ದಾಗ ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿ ಮೃತ್ಯು

0

ಕಾಸರಗೋಡು: ಬೇಕಲದಲ್ಲಿ ಮೀನು ಹಿಡಿಯುತ್ತಿದ್ದಾಗ ಕಲ್ಲು ಬಂಡೆಯಿಂದ ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಬೇಕಲ ಶಕ್ತಿನಗರದ ಝುಬೈರ್ ರವರ ಪುತ್ರ ಶುಹೈಬ್ (16) ಎಂದು ಗುರುತಿಸಲಾಗಿದೆ.

ಶುಹೈಬ್ ಬೆಳಿಗ್ಗೆ ತಂದೆ ಹಾಗೂ ಸಹೋದರನೊಂದಿಗೆ ಚಿಪ್ಪು ಮೀನು ಸಂಗ್ರಹಿಸಲು ಬೇಕಲ ಕಡಲ ಕಿನಾರೆಗೆ ತಲಪಿದ್ದು ಬಂಡೆ ಕಲ್ಲಿನೆಡೆಯಲ್ಲಿದ್ದ ಚಿಪ್ಪು ಮೀನು ಹೆಕ್ಕುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಸಮುದ್ರಪಾಲಾಗಿದ್ದಾನೆ.

ಇನ್ನು ಪೊಲೀಸರು, ಅಗ್ನಿಶಾಮಕ ದಳದ ಸಿಬಂದಿಗಳು ಶೋಧ ನಡೆಸಿ ಮೃತದೇಹವನ್ನು ಮಧ್ಯಾಹ್ನದ ವೇಳೆಗೆ ಮೇಲಕ್ಕೆತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!