March 21, 2026

ಧಗಧಗನೆ ಹೊತ್ತಿ ಉರಿದ ಬೈಹುಲ್ಲು ಲಾರಿ: ಜೀವ ಪಣಕ್ಕಿಟ್ಟು ರಕ್ಷಿಸಿದ ಆಪತ್ಭಾಂಧವ

0
IMG_20220202_201531.jpg

ಕೊಚ್ಚಿ: ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆಯಿಂದಾಗಿ ಕೇರಳದ ಕೊಡಂಚೇರಿ ಪಟ್ಟಣದನಅಮಲ್ಲಿ ದೊಡ್ಡ ದುರಂತವೊಂದು ತಪ್ಪಿದೆ.

ರವಿವಾರದಂದು ಭತ್ತದ ಹುಲ್ಲು ತುಂಬಿದ್ದ ಲಾರಿಗೆ ಓವರ್‌ಹೆಡ್ ವಿದ್ಯುತ್ ತಂತಿ ತಗಲಿದ ನಂತರ ಬೆಂಕಿ ಹೊತ್ತಿಕೊಂಡಿತ್ತು. ಲಾರಿಯ ಚಾಲಕ ತನ್ನ ವಾಹನವು ಬೆಂಕಿಯಲ್ಲಿ ಉರಿದುಹೋಗುತ್ತದೆ ಎಂದು ಖಚಿತವಾಗಿ ಅಸಹಾಯಕನಾಗಿ ನಿಂತಿದ್ದ.

ಆಗ ಆಪತ್ಬಾಂಧವನಂತೆ ಬಂದ ವ್ಯಕ್ತಿಯೊಬ್ಬ ಲಾರಿಯನ್ನು ಉಳಿಸಲು ಹಾಗೂ ದೊಡ್ಡ ದುರಂತವನ್ನು ತಪ್ಪಿಸಲು ಕಾರ್ಯಪ್ರವೃತ್ತನಾಗಿದ್ದ.

ರವಿವಾರ ಮಧ್ಯಾಹ್ನ 12.30ರ ಸುಮಾರಿಗೆ ಲಾರಿ ಚಾಲಕ ತನ್ನ ವಾಹನದಿಂದ ಜಿಗಿದಾಗ ಶಾಜಿ ವರ್ಗೀಸ್ ಎಂಬುವವರು ಆಗಮಿಸಿದರು. ವರ್ಗೀಸ್ ಆ ಪ್ರದೇಶವನ್ನು ಹಾಗೂ ಅಲ್ಲಿನ ನಿವಾಸಿಗಳನ್ನು ಸಂಭವನೀಯ ಸ್ಫೋಟದಿಂದ ರಕ್ಷಿಸುವ ಪ್ರಯತ್ನಕ್ಕೆ ಕೈಹಾಕಿದರು.

ಬೆಂಕಿಯಿಂದ ಉರಿಯುತ್ತಿದ್ದ ಲಾರಿಯನ್ನು ಏರಿದ ವರ್ಗೀಸ್ ಖಾಲಿ ಆಟದ ಮೈದಾನದತ್ತ ಅದನ್ನು ಓಡಿಸಿದರು. ಉರಿಯುತ್ತಿರುವ ವಾಹನವನ್ನೂ ಉಳಿಸುವಲ್ಲಿ ಯಶಸ್ವಿಯಾದರು.

ಸಾಧ್ಯವಾದಷ್ಟು ಹೆಚ್ಚು ಸುಡುವ ಲೋಡ್ ಅನ್ನು ಆಫ್‌ಲೋಡ್ ಮಾಡಲು ಲಾರಿಯನ್ನು ‘ಜಿಗ್‌ಜಾಗ್’ ರೀತಿಯಲ್ಲಿ ಓಡಿಸಿದ್ದ ವರ್ಗೀಸ್, ಇತರ ಸ್ವಯಂಸೇವಕರೊಂದಿಗೆ ವಾಹನವು ಸುಟ್ಟುಹೋಗದಂತೆ ತಡೆಯುವಲ್ಲಿ ಯಶಸ್ವಿಯಾದರು.

ಮತ್ತು ಅಗ್ನಿಶಾಮಕ ದಳದವರ ಆಗಮನದವರೆಗೆ ಪರಿಸ್ಥಿತಿಯನ್ನು ಸುರಕ್ಷಿತವಾಗಿ ನಿರ್ವಹಿಸಿದರು.
ವರ್ಗೀಸ್ ಅವರ ಧೈರ್ಯಶಾಲಿ ದೃಶ್ಯದ ತುಣುಕನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಈ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡ ವರ್ಗೀಸ್ “ನಾನು 25 ವರ್ಷಗಳಿಂದ ಹೆವಿ ಡ್ಯೂಟಿ ಮೋಟಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹಳ್ಳಿ ಮತ್ತು ವಿದೇಶಗಳಲ್ಲಿ ಇದೇ ರೀತಿಯ ಅಪಾಯಕಾರಿ ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ನನ್ನ ಹಿಂದಿನ ಅನುಭವಗಳು ಈ ಸವಾಲನ್ನು ಎದುರಿಸಲು ನನಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ’’ ಎಂದು ಹೇಳಿದ್ದಾರೆ.

ಬೆಂಕಿ ಹೊತ್ತಿದ್ದ ಲಾರಿಯನ್ನು ಚಲಾಯಿಸಿದ್ದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದರಿಂದ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಿಗೆ ವರ್ಗೀಸ್‌ರವರನ್ನು ಆಹ್ವಾನಿಸಲಾಗುತ್ತಿದೆ ಹಾಗೂ ಸ್ನೇಹಿತರು ಮತ್ತು ಕುಟುಂಬದಿಂದ ಭರಪೂರ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!