ವಿಟ್ಲ ದ ಕ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ ದ ಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಮತ್ತು ವಿಟ್ಠಲ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ವಿಟ್ಲ ಇವರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 17ರ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವು ವಿಟ್ಠಲ ಪದವಿ ಪೂರ್ವ ಕಾಲೇಜಿನ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಬಾಲಕರ ವಿಭಾಗ ಪುತ್ತೂರು ತಾಲೂಕು ಪ್ರಥಮ, ಬಂಟ್ವಾಳ ತಾಲೂಕು ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗ ಪುತ್ತೂರು ತಾಲೂಕು ಪ್ರಥಮ ಮತ್ತು ಮಂಗಳೂರು ದಕ್ಷಿಣ ದ್ವಿತೀಯ ಸ್ಥಾನ ಪಡೆಯಿತು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷಕ ಪ್ರಕಾಶ್ ದೇವಾಡಿಗ, ಸುಬ್ರಹ್ಮಣ್ಯ ಪೊಲೀಸ್ ಠಾಣೆ ಎಸ್ ಐ ಆಂಜನೇಯ ರೆಡ್ಡಿ, ವಿಟ್ಠಲ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಶಂಕರನಾರಾಯಣ ಪ್ರಸಾದ್, ಬಾಬು ಕೊಪ್ಪಳ, ರವಿಪ್ರಕಾಶ್, ಸುದರ್ಶನ್ ಪಡಿಯಾರ್, ನಿತ್ಯಾನಂದ ನಾಯಕ್, ರಮನಾಥ ವಿಟ್ಲ, ಆದರ್ಶ ಚೊಕ್ಕಾಡಿ, ಜಗದೀಶ್, ವಿಷ್ಣು ನಾರಾಯಣ ಹೆಬ್ಬಾರ್, ರಾಜೇಂದ್ರ ರೈ, ಶಿವಪ್ರಸಾದ್ ರೈ, ಮೋಹನ್ ಬಿ, ರಮೇಶ್ ಬಿ ಕೆ, ಕಿರಣ್ ಕುಮಾರ್ ಬ್ರಹ್ಮಾವರ್, ಸುರೇಶ್ ಶೆಟ್ಟಿ, ಶ್ರೀನಿವಾಸ್ ಗೌಡ ಮತ್ತಿತರರು ಉಪಸ್ಥಿತರಿದ್ದರು.





