December 15, 2025

ಬಿಜೆಪಿಯ ಮಂಡಲ ಅಧ್ಯಕ್ಷನ ಗುಂಡಿಕ್ಕಿ ಹತ್ಯೆ

0
image_editor_output_image295291720-1742082291030.jpg

ಚಂಡೀಗಢ: ಬಿಜೆಪಿಯ ಮುಂಡ್ಲಾನಾ ಮಂಡಲ ಅಧ್ಯಕ್ಷ ಮತ್ತು ಗ್ರಾಮ ಸಂಖ್ಯಾದಾರ ಸುರೇಂದ್ರ ಅವರನ್ನು ಶುಕ್ರವಾರ ರಾತ್ರಿ ಹರ್ಯಾಣದ ಸೋನಿಪತ್‌ನ ಜವಾಹರ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಭೂ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣ ಸಂಬಂಧ ಮೋನು ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಸ್ಥಳೀಯ ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಘಟನೆಯ ದೃಶ್ಯಗಳು ಸೆರೆಯಾಗಿದೆ.

ಶುಕ್ರವಾರ ರಾತ್ರಿ 9:15ರ ಸುಮಾರಿಗೆ ಮಂಡಲ ಅಧ್ಯಕ್ಷ ಸುರೇಂದ್ರ ಜವಾಹರ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ದೃಶ್ಯದಲ್ಲಿ ಸುರೇಂದ್ರ ಮನೆಯ ಹೊರಗಿನ ಬೀದಿಯಲ್ಲಿ ನಿಂತಿದ್ದರು. ನೆರೆಮನೆಯ ಮೋನು ಸ್ಥಳಕ್ಕೆ ಬಂದು ಸುರೇಂದ್ರ ಮೇಲೆ ಗುಂಡು ಹಾರಿಸಿದ್ದಾನೆ.

ಸುರೇಂದ್ರ ತಪ್ಪಿಸಿಕೊಂಡು ಹತ್ತಿರದ ದಿನಸಿ ಅಂಗಡಿಗೆ ನುಗ್ಗಿದ ವೇಳೆ ದಾಳಿಕೋರ ಒಳಗೆ ಹೋಗಿ ಎರಡನೇ ಗುಂಡು ಹಾರಿಸಿದ್ದಾನೆ. ದಾಳಿಕೋರ ಮೋನು ಹಣೆಗೆ ಒಂದು ಗುಂಡು, ಹೊಟ್ಟೆಗೆ ಎರಡನೇ ಗುಂಡು ಹಾರಿಸಿ ಪರಾರಿಯಾಗಿದ್ದ.

Leave a Reply

Your email address will not be published. Required fields are marked *

error: Content is protected !!