ಹರೇಕಳ: ನೇತ್ರಾವತಿ ನದಿ ತಟದ ಹರೇಕಳ ಪಾವೂರಿನಿಂದ ಸಜಿಪ ಕೋಟೆಕಣಿಯವರೆಗೆ ನದಿ ಬದಿಯ ರಸ್ತೆ ನಿರ್ಮಾಣವಾಗಲಿದೆ.
ಈ ಹಿನ್ನೆಲೆ ಗುರುವಾರದಂದು ಸ್ಥಳಕ್ಕೆ ಆಗಮಿಸಿದ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ದೋಣಿಯಲ್ಲಿ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಅಭಿವೃದ್ಧಿ ಕಾಮಗಾರಿಗಳ ಕುರಿತು ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.

