ಕೊಡಂಗಾಯಿ: ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ದ. ಕ. ಜಿ. ಪಂ. ಉ.ಹಿ . ಪ್ರಾ. ಶಾಲೆ, ಕೊಡಂಗಾಯಿ ಯಲ್ಲಿ
ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು
ಶಾಲಾ ಎಸ್.ಡಿ.ಎಂ. ಸಿ ಅಧ್ಯಕ್ಷರಾದ ಕೆ. ಎ.ಹಮೀದ್ ಮೂರ್ಜೆಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಎಸ್.ಡಿ.ಎಂ. ಸಿ ಉಪಾಧ್ಯಕ್ಷರಾದ ಶ್ರೀ ಉಮೇಶ ಕೊಡಂಗಾಯಿ,
ಮಾಜಿ ಅಧ್ಯಕ್ಷರಾದ ಹಮೀದ್ ಕೊಡಂಗಾಯಿ,
ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಶ್ರೀ ಸುದೇಶ್ ಭಂಡಾರಿ ಎರ್ಮೆನಿಲೆ,


ಕಾರ್ಯದರ್ಶಿ ಶ್ರೀ ಅರವಿಂದ ರೈ ಮೂರ್ಜೆಬೆಟ್ಟು,
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಮಜೀದ್ ಟಿ ಎಂ
,ಶಿಲ್ಪ ಶ್ರೀ ಯುವಕ ಮಂಡಲದ ಅಧ್ಯಕ್ಷರಾದ ರೋಹಿತ್ ರೈ ಚೆಂಬರಡ್ಕ,
ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಸಂದೇಶ್ ಶೆಟ್ಟಿ ಬಿಕ್ನಾಜೆ
ಎಸ್ ಡಿ ಎಂ ಸಿ ಮತ್ತು ವಾರ್ಡ್ ಸದಸ್ಯರಾದ ಶ್ರೀಮತಿ ರೇಖಾ,
ಮರ್ಹಬಾ ಕಮ್ಯುನಿಟಿ ಟ್ರಸ್ಟ್ ಕಾರ್ಯದರ್ಶಿ ರಾಹಿದ್,
ವಿದ್ಯಾಭಿಮಾನಿ ಇಸ್ಮಾಯಿಲ್ ಶಾಲಾಬಳಿ,
ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಭಟ್ ಪಳ್ಳಿಗದ್ದೆ,
ಎಸ್.ಡಿ.ಎಂ. ಸಿ ಸದಸ್ಯರಾದ ಹಸೈನಾರ್ ಬಿಕ್ನಾಜೆ
ಬಿ ಎ ಕಾದರ್ ಬಿಕ್ನಾಜೆ
ಅಬೂಬಕರ್ ಗೂಡು,
ಮೇಲಂಗಡಿ ಅಬೂಬಕರ್
ಶ್ರೀಮತಿ ಭಾಗೀರಥಿ, ಎಂ ಸಿ ಟಿ ಸದಸ್ಯರುಗಳು
,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗುಲಾಬಿ,
ಅರೋಗ್ಯ ಕಾರ್ಯಕರ್ತೆ ಶ್ರೀಮತಿ ಗೀತಾ,
ಆಶಾ ಕಾರ್ಯಕರ್ತೆ ಶ್ರೀಮತಿ ಗ್ರೇಸಿ, ಹಾಗೂ
ಊರಿನ ಹಿರಿಯರು ಮತ್ತು ಪೋಷಕರು, ಉಪಸ್ಥಿತರಿದ್ದರು.
ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿ ಸಂಘ ಕೊಡಂಗಾಯಿ ಇವರ ವತಿಯಿಂದ ಸ್ಮರಣಿಕೆ ಹಾಗೂ
ಲಯನ್ಸ್ ಕ್ಲಬ್ ಮತ್ತು ದತ್ತಿ ನಿಧಿ ವತಿಯಿಂದ ನಗದು ಬಹುಮಾ ನೀಡಲಾಯಿತು
. ಚಿತ್ರಕಲೆ ಮತ್ತು ಸ್ಮರಣಶಕ್ತಿ ಸ್ಪರ್ಧೆಯ ಬಹುಮಾನದ ಪ್ರಾಯೋಜಕತ್ವ ವನ್ನು ಹಮೀದ್ ಮತ್ತು ಇಸ್ಮಾಯಿಲ್ ವಹಿಸಿಕೊಂಡು ಸಹಕರಿಸಿದರು
ಶಾಲಾ ಮಕ್ಕಳ ಕ್ರೀಡಾ ಕೂಟದ ಆಯೋಜನೆ ಹಾಗೂ ಬಹುಮಾನದ ಪ್ರಾಯೋಜಕತ್ವ ಮರ್ಹಬಾ ಕಮ್ಯುನಿಟಿ ಟ್ರಸ್ಟ್ ಇವರು ವಹಿಸಿದರು.
ಸಿಹಿ ತಿಂಡಿ ಹಾಗೂ ಪಾನೀಯದ ಪ್ರಾಯೋಜಕತ್ವ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ರು ವಹಿಸಿದರು .
ಶಾಲಾ ಮಕ್ಕಳಿಗೆ ಸಹ ಶಿಕ್ಷಕಿ ವೇದಾವತಿ ಇವರು ಐಸ್ ಕ್ರೀಂ ನೀಡಿ ಸಹಕರಿಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ಲೋಲಾಕ್ಷಿ ಇವರು ಸ್ವಾಗತಿಸಿದರು.
ಸಹ ಶಿಕ್ಷಕಿ ಶ್ರೀಮತಿ ವೇದಾವತಿ ಕಾರ್ಯಕ್ರಮ ನೀರೂಪಿಸಿದರು.
ಅತಿಥಿ ಶಿಕ್ಷಕಿ ಶ್ರೀಮತಿ ಮಲ್ಲಿಕಾ ಹಾಗೂ ಜ್ಞಾನದೀಪ ಶಿಕ್ಷಕಿ ಚೈತ್ರಾ ಸಹಕರಿಸಿದರು.
ಸಹ ಶಿಕ್ಷಕಿ ಶ್ರೀಮತಿ ವಾಣಿಶ್ರೀ ಧನ್ಯವಾದ ಅರ್ಪಿಸಿದರು




