ವಿಟ್ಲ: ಎಂಜಿಆರ್ ಕಾರ್ಪೋರೇಷನ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ವಿಟ್ಲ: ಎಂಜಿಆರ್ ಕಾರ್ಪೋರೇಷನ್ ವತಿಯಿಂದ ವಿಟ್ಲದ ಸ್ಮಾರ್ಟ್ ಸಿಟಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು ಧ್ವಜಾರೋಹಣ ಗೈದರು.
ಈ ಸಂದರ್ಭ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ರಾಮ್ ದಾಸ್ ಶೆಟ್ಟಿ, ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ, ಕಿಟ್ ಕ್ಯಾಟ್ ಪೆಟ್ ಶಾಫ್ ನ ಮಾಲೀಕ ಇಸ್ಮಾಯಿಲ್ ಕೊಡಂಗೆ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕ್ಕರ್ ಅನಿಲಕಟ್ಟೆ, ಹಕೀಂ, ಖಲಂದರ್ ಕನ್ಯಾನ, ಎಂಜಿಆರ್ ಕಾರ್ಪೋರೇಷನ್ ನ ಪಾಲುದಾರರಾದ ಮಹಮ್ಮದ್ ರಫೀ ಎಂ ಯು, ಅಬ್ದುಲ್ ಮಜೀದ್, ಮಹಮ್ಮದ್ ಗೌಸ್, ಮೊದಲಾದವರು ಉಪಸ್ಥಿತರಿದ್ದರು.