ವಿಟ್ಲ: ಮೇಗಿನಪೇಟೆಯ ಇಬ್ಬರು ವ್ಯಕ್ತಿಗಳು ಒಂದೇ ದಿನ ನಿಧನ
ವಿಟ್ಲ: ಮೇಗಿನಪೇಟೆ ನಿವಾಸಿ
ಅಬ್ದುಲ್ ರಹಿಮಾನ್ ಯಾನೆ ಅದ್ರಮಚ್ಚ( 80) ಅವರು ಭಾನುವಾರ ನಿಧನರಾದರು.
ವಿಟ್ಲದ ಮೇಗಿನಪೇಟೆಯಲ್ಲಿ ಮೈಕ್ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಅನಾರೋಗ್ಯದಿಂದ ನಿಧನ ಹೊಂದಿದರು. ಅವರಿಗೆ ಸಹೋದರರು ಮತ್ತು ಸಹೋದರಿಯರು ಇದ್ದಾರೆ.
ಯೂಸೂಫ್ ಪೊನ್ನೋಟು
ವಿಟ್ಲ; ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಕೆಲವು ವರ್ಷಗಳಿಂದ ಗೂಡಂಗಡಿ ನಡೆಸುತ್ತಿದ್ದ ಯೂಸೂಫ್ ಪೊನ್ನೋಟು (81 ವರ್ಷ) ಅಕ್ಟೋಬರ್ 13 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು
ಅವರು ಪತ್ನಿ, ನಾಲ್ಕು ಗಂಡು,ಇಬ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಬ್ಯಾರಿ ಸಾಹಿತಿ ಅಕಾಡೆಮಿಯ ಸದಸ್ಯ ಅಬೂಬಕ್ಕರ್ ಅನಿಲಕಟ್ಟೆ ಅವರ ಪತ್ನಿಯ ತಂದೆಯಾಗಿದ್ದಾರೆ. ಮೃತ ಇವರಿಬ್ಬರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು.




