ಸೊಸೈಟಿಯಲ್ಲಿ ಸಾಲಗಾರರ ಕಿರುಕುಳ ತಾಳಲಾರದೇ ಯುವಕ ಆತ್ಮಹತ್ಯೆ

ಬೆಳಗಾವಿ: ಸುಳೇಭಾವಿ ಗ್ರಾಮದ ಕಿರಣ ಬಾಳಣ್ಣ ಗೋಕಾವಿ (32) ಎಂಬ ಯುವ ನೇಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ವಿವಿಧ ಕಡೆಗೆ ಕೈಗಡ ಸಾಲ ಪಡೆದಿದ್ದನು.
ಜತೆಗೆ ಸೊಸೈಟಿಯಲ್ಲಿಯೂ ಸಾಲ ಪಡೆದಿದ್ದನು. ಸಾಲಗಾರರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯುತ್ ಮಗ್ಗದ ಕೋಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆ. 4ರಂದು ಸಾಲಬಾಧೆಯಿಂದ ಇದೇ ಗ್ರಾಮದ ವಾಡೇ ಗಲ್ಲಿಯ ನೇಕಾರ ಪರುಶರಾಮ ಕಲ್ಲಪ್ಪ ವಾಗೂಕರ(47) ಆತ್ಮಹತ್ಯೆ ಮಾಡಿಕೊಂಡಿದ್ದನು.