September 20, 2024

ವಿಟ್ಲ: ಒಕ್ಕೆತ್ತೂರಿನಲ್ಲಿ LAZZATH Multi Cuisine Restaurant ಶುಭಾರಂಭ: ಮೀನಿನ ಬಾಳೆ ಊಟ, ಚಟ್ಟಿ ಊಟ, ಗಂಜಿ ಕುಡಿಕೆ ವಿಭಿನ್ನ ರೀತಿಯ ಆಹಾರಗಳು ಲಭ್ಯ

0

ವಿಟ್ಲ: ವಿಟ್ಲ-ಮಂಗಳೂರು ರಸ್ತೆಯ ಒಕ್ಕೆತ್ತೂರು ಎಂಬಲ್ಲಿ ನೂತನವಾಗಿ LAZZATH Multi Cuisine Restaurant  ಶುಭಾರಂಭಗೊಂಡಿತು. ಸಯ್ಯದ್ ಅಟ್ಟಕೋಯ ತಂಙಳ್ ಕುಂಬೋಳ್ ನೂತನ ಸಂಸ್ಥೆಯನ್ನು  ಉದ್ಘಾಟಿಸಿ, ದುವಾಃ ಆಶೀರ್ವಚನ ನೀಡಿದರು.

ಸಂಸ್ಥೆಯ ಮಾಲಕರಾದ ಅಬ್ಬಾಸ್ ಕರಾವಳಿ,  ವಿ.ಎಂ ಫ್ಯಾಮಿಲಿ ಸದಸ್ಯರು, ಮಸೀದಿ ಅಧ್ಯಕ್ಷ ಹಸೈನಾರ್ ಹಾಜಿ, ವಿ.ಎಸ್ ಇಬ್ರಾಹಿಂ, ಸುಲೈಮಾನ್ ಸೂಪರ್,
ಸೈಫುದ್ದೀನ್ ಅಬುದಾಬಿ ಉಪಸ್ಥಿತರಿದ್ದರು.

ಇಲ್ಲಿ ಗ್ರಾಹಕರಿಗೆ ಬಾಳೆ ಎಲೆ ಊಟ, ಚಟ್ಟಿ ಊಟ, ಗಂಜಿ ಕುಡಿಕೆ ವಿಭಿನ್ನ ರೀತಿಯಲ್ಲಿ ಊಟ ದೊರೆಯಲಿದೆ. ಅರೇಬಿಯಾನ್, ನಾರ್ತ್ ಇಂಡಿಯನ್, ತಾಜಾ ಮೀನಿನ ಊಟ, ಚೈನಿಸ್ ತಿಂಡಿಗಳು ದೊರೆಯಲಿದೆ. ಮಂಗಳೂರು ನಗರದಲ್ಲಿ ಸಿಗುತ್ತಿದ್ದ ತಾಜಾ ಮೀನಿನ ಊಟ ಇದೀಗ ವಿಟ್ಲ ಸಮೀಪ ಗ್ರಾಹಕರಿಗೆ ದೊರೆಯುತ್ತಿದ್ದು, ಜನರು ಸಂಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೆಸರಾಂತ ಅಡುಗೆಯವರು ತಯಾರಿಸಿದ ವಿವಿಧ ರುಚಿ ರುಚಿಕರವಾದ ಊಟ ಮಿತದರಲ್ಲಿ ಲಭ್ಯವಾಗಲಿದೆ. ಸುಸಜ್ಜಿತವಾದ ಕುಳಿತುಕೊಳ್ಳುವ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಟ್ಲ-ಮಂಗಳೂರು ರಸ್ತೆಯ ಮಧ್ಯೆದಲ್ಲಿ ಈ ಸುಸಜ್ಜಿತವಾದ ರೆಸ್ಟೋರೆಂಟ್ ಪ್ರಾರಂಭಗೊಂಡಿದ್ದು, ವಾಹನ ಸವಾರಿಗೆ ಪ್ರವಾಸಿಗರಿಗೆ ತುಂಬ ಪ್ರಯೋಜನ ಸಿಕ್ಕದಂತಾಗಿದೆ.

Leave a Reply

Your email address will not be published. Required fields are marked *

error: Content is protected !!