September 20, 2024

ಬೆಳ್ತಂಗಡಿ: ಲಂಚ ಪ್ರಕರಣದಲ್ಲಿ ಮಾಲಾಡಿ ಪಂ. ಅಭಿವೃದ್ಧಿ ಅಧಿಕಾರಿ ಎಸಿಬಿ ಬಲೆಗೆ

0

ಬೆಳ್ತಂಗಡಿ: ಜಾಗದ 9/11 ವಿಚಾರವಾಗಿ ಸಾರ್ವಜನಿಕರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಮಾಲಾಡಿ ಪಂ. ಅಭಿವೃದ್ಧಿ ಅಧಿಕಾರಿ ರವಿ ಅವರು ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಗ್ರಾಮಸ್ಥರೊಬ್ಬರಿಂದ ಜಾಗದ 9/11 ಒದಗಿಸಲು 15,000 ರೂ. ಲಂಚ ಪಡೆಯುವ ವೇಳೆ ದ.ಕ. ಭ್ರಷ್ಟಚಾರ ನಿಗ್ರಹದಳದ ತಂಡ ಸೋಮವಾರ ದಾಳಿ ನಡೆಸಿದೆ.

ಭ್ರಷ್ಟಚಾರ ನಿಗ್ರಹದಳದ ಇನ್ಸ್ ಪೆಕ್ಟರ್ ಗುರುರಾಜ್ ಹಾಗೂ ಶ್ಯಾಮ್ ಸುಂದರ್ ನೇತೃತ್ವದಲ್ಲಿ ಡಿವೈಎಸ್ ಪಿ ಕೆ.ಸಿ.ಪ್ರಕಾಶ್ ದಾಳಿ ನಡೆಸಿದ್ದಾರೆ. ಸಿಬ್ಬಂದಿಗಳಾದ ರಾಧಾಕೃಷ್ಣ, ಹರಿಪ್ರಸಾದ್, ಆದರ್ಶ್, ಗಂಗಾಧರ್, ಮೋಹನ್, ವೈಶಾಲಿ ಸಹಕರಿಸಿದ್ದರು. ಪಿಡಿಒ ಅವರನ್ನು ವಶಕ್ಕೆ ಪಡೆದು ಲಂಚದ ವಿಚಾರವಾಗಿ ವಿಚಾರಣೆ ಮುಂದುವರೆಸಲಾಗಿದೆ.

Leave a Reply

Your email address will not be published. Required fields are marked *

error: Content is protected !!