ಕುಂದಾಪುರ: ಭಾರೀ ಗಾಳಿಯೊಂದಿಗೆ ಮಳೆ: ಮನೆಗಳಿಗೆ ಹಾನಿ, ಮರಗಿಡಗಳು ಧರಾಶಾಹಿ
ಕುಂದಾಪುರ: ತಾಲೂಕಿನ ಅಮಾಸೆಬೈಲು ಗ್ರಾಮದ ರಟ್ಟಾಡಿ, ಕೊಳಂಜೆ, ಜಡ್ಡಿನಗದ್ದೆ ಮೊದಲಾದೆಡೆಗಳಲ್ಲಿ ಬುಧವಾರ ಬೀಸಿದ ಸುಂಟರಗಾಳಿಗೆ ಮನೆ, ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿ ಸಂಭವಿಸಿದ್ದು ಲಕ್ಷಾಂತರ ಮೌಲ್ಯದ ಮರಗಿಡಗಳು ಧರಾಶಾಹಿಯಾಗಿದೆ.
ಮನೆಗಳ ಹೆಂಚು ಹಾರಿಹೋಗಿರುವುದು, ಮನೆ ಕೊಟ್ಟಿಗೆ ಮೇಲೆ ಮರಬಿದ್ದಿರುವುದು, ಮೆಸ್ಕಾಂ ಕಂಬಗಳ ನೆಲಕ್ಕುರುಳಿರುವುದು ಸೇರಿದಂತೆ ಅಪಾರ ಸಂಭವಿಸಿದೆ.




