October 22, 2024

ಕಾಲುವೆಗೆ ಬಿದ್ದ ಕಾರು:
ನಾಲ್ವರು ಸ್ಥಳದಲ್ಲೇ ಮೃತ್ಯು

0

ಬಾಗಲಕೋಟೆ: ಕಾರು ಪಲ್ಟಿಯಾಗಿ ಕಾಲುವೆಗೆ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಲೋಕಾಪೂರ ಪಟ್ಟಣದ ಬಳಿ ನಡೆದಿದೆ.

ಜಮಖಂಡಿಯಿಂದ ರಾಮದುರ್ಗ ಕಡೆಗೆ ಪ್ರಯಾಣಿಸುತ್ತಿದ್ದ ಕಾರು, ಲೋಕಾಪೂರ ಪಟ್ಟಣದ ಸಮೀಪ ರಸ್ತೆಯಿಂದ ನೀರಿಲ್ಲದ ಕಾಲುವೆಗೆ ಬಿದ್ದಿದೆ. ಕಾರಿನಲ್ಲಿದ್ದ ನಾಲ್ವರ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

ಮೃತ ಪಟ್ಟವರನ್ನು ಕಾರು ಚಾಲಕ ಸುನೀಲ್ (24 ವ), ಮಹಾದೇವ ಪಾಟೀಲ್ (27 ವ), ಎರಿತಾ ಕಂಬಾರ(26 ವ), ವಿಜಯ್ (26 ವ) ಎಂದು ಗುರುತಿಸಲಾಗಿದೆ. ಇವರೆಲ್ಲ ರಾಮದುರ್ಗ ತಾಲೂಕಿನ ಗುಡಮ್ಮನಾಳ ಗ್ರಾಮದವರು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!