December 19, 2025

ಸುಬ್ರಹ್ಮಣ್ಯದಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ:
ಹೆದ್ದಾರಿ ದಾಟಿ ನಾಡಿಗೆ ಬಂದ ಆನೆ

0
IMG-20211210-WA0045.jpg

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪ ಕಾಡಾನೆಯೊಂದು ಕಾಡಿನಿಂದ ಹೆದ್ದಾರಿ ದಾಟಿ ನಾಡಿಗಿಳಿದ ಘಟನೆ ಶುಕ್ರವಾರ ಸಂಜೆ ವೇಳೆ ನಡೆದಿದೆ.

ಸುಬ್ರಹ್ಮಣ್ಯ – ಗುತ್ತಿಗಾರು – ಸುಳ್ಯ ಸಂಪರ್ಕ ರಾಜ್ಯ ಹೆದ್ದಾರಿಯ ನಡುಗಲ್ಲು ಸಮೀಪದ ಅಂಜೇರಿ ಬಸ್ ತಂಗುದಾನದ ಬಳಿ ಕಾಡಾನೆ ಕಾಡಿನಿಂದ ಇಳಿದು ರಸ್ತೆ ದಾಟಿ ಕೆಳ ಭಾಗದ ತೋಟಕ್ಕೆ ತೆರಳಿದೆ. ಇದೇ ಸಂದರ್ಭದಲ್ಲಿ ವಾಹನಗಳು ರಸ್ತೆ ದಾಟುತ್ತಿದ್ದರೂ ಕಾಡಾನೆ ಸ್ವಲ್ಪ ಹೊತ್ತು ರಸ್ತೆ ಬದಿ ನಿಂತು ಬಳಿಕ ತೋಟದ ಕಡೆ ತೆರಳಿದೆ.

ಇತ್ತೀಚೆಗೆ ಕಾಡಾನೆಗಳು ನಾಡಿನತ್ತ ಮುಖ ಮಾಡುತ್ತಿರುವ ಘಟನೆ ಹಲವೆಡೆ ನಡೆಯುತ್ತಿದೆ. ಜನತೆ ಇದರಿಂದಾಗಿ ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!