ಬಾಯ್ಲರ್ ರಿಪೇರಿ ಮಾಡುವಾಗ ಹೊರಬಂದ ಭಾರೀ ಪ್ರಮಾಣದ ಬಿಸಿ ಗಾಳಿ: ಕೊಡಗಿನ ಯುವಕ ಮೃತ್ಯು
ಚಿಕ್ಕಮಗಳೂರು: ಬಾಯ್ಲರ್ ರಿಪೇರಿ ಮಾಡುವಾಗ ಹೊರಬಂದ ಭಾರೀ ಪ್ರಮಾಣದ ಬಿಸಿ ಗಾಳಿಗೆ ಯುವಕನೊಬ್ಬ ಸಾವಿಗೀಡಾದ ಘಟನೆ ಹರಿಹರದಹಳ್ಳಿ ಸಮೀಪದ ಕಾಫಿ ಕ್ಯೂರಿಂಗ್ನಲ್ಲಿ ನಡೆದಿದೆ.
ಮೃತನನ್ನ ಕೊಡಗಿನ ಕುಶಾಲನಗರ ಮೂಲದ ಉದಯ್ (28) ಎಂದು ಗುರುತಿಸಲಾಗಿದೆ.
ರಿಪೇರಿ ವೇಳೆ ಬಾಯ್ಲರ್ನಿಂದ ಸುಮಾರು 340 ಡಿಗ್ರಿ ಸೆಲ್ಸಿಯಸ್ ಬಿಸಿ ಗಾಳಿಗೆ ಯುವಕ ಹಾರಿ ಬಿದ್ದಿದ್ದಾನೆ. ಬಿಸಿಯ ತೀವ್ರತೆಗೆ ಆತನ ದೇಹ ಸುಟ್ಟು ಕರಕಲಾಗಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾ




