February 2, 2026

ನೇಣು ಹಾಕುವ ಬದಲು ಇಂಜೆಕ್ಷನ್, ಕರೆಂಟ್, ಗ್ಯಾಸ್ ಚೇಂಬರ್ ಮೂಲಕ ಮರಣದಂಡನೆ:
ತಜ್ಞರ ಸಮಿತಿ ನೇಮಕಕ್ಕೆ ಕೇಂದ್ರ ಚಿಂತನೆ

0
954956-supreme-court-1.jpg

ನವ ದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳನ್ನ ಗಲ್ಲಿಗೇರಿಸುವುದನ್ನು ಹೊರತುಪಡಿಸಿ ಇತರ ಮಾರ್ಗಗಳನ್ನ ಪರಿಗಣಿಸಲು ತಜ್ಞರ ಸಮಿತಿಯನ್ನ ರಚಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

2017ರಲ್ಲಿ ವಕೀಲ ರಿಷಿ ಮಲ್ಹೋತ್ರಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಗಲ್ಲು ಶಿಕ್ಷೆ ವಿಧಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಆಗ್ರಹಿಸಿದ್ದು, ಇದರಲ್ಲಿ ಸಂಕಟದ ಮರಣವಿದೆ. ಇದರ ಬದಲಾಗಿ ಮರಣದಂಡನೆ ವಿಧಿಸಲು ಬೇರೆ ಮಾರ್ಗವನ್ನ ಯೋಚಿಸಬೇಕು ಎಂದಿದ್ದರು.

ವಕೀಲ ರಿಷಿ ಮಲ್ಹೋತ್ರಾ ಅವರ ಅರ್ಜಿಯ ಮೇಲೆ ಸರ್ಕಾರಕ್ಕೆ ಹಲವು ಮಾರ್ಗಗಳನ್ನ ಸೂಚಿಸಿದ್ದಾರೆ. ಇಂಜೆಕ್ಷನ್, ಶೂಟಿಂಗ್, ವಿದ್ಯುದಾಘಾತ ಅಥವಾ ಗ್ಯಾಸ್ ಚೇಂಬರ್ ಬಳಕೆಯಂತಹ ಕಡಿಮೆ ನೋವಿನ ವಿಧಾನಗಳನ್ನ ಅವರು ವಿನಂತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪದ್ರಿವಾಲಾ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ವಾದ ಮಂಡಿಸಿದ್ದರು. ಈ ಕುರಿತು ಸಮಿತಿ ರಚಿಸಲು ಸರಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು. ಇದಕ್ಕೆ ಸುಪ್ರೀಂ ಕೋರ್ಟ್ ಪೀಠವೂ ಸಹಮತ ವ್ಯಕ್ತಪಡಿಸಿದ್ದು, ಸಮಿತಿ ರಚನೆ ಪ್ರಕ್ರಿಯೆ ಪರಿಶೀಲನೆಯಲ್ಲಿದೆ ಎಂದು ಹೇಳಿದೆ. ಈಗ ಬೇಸಿಗೆ ರಜೆಯ ನಂತ್ರ ವಿಚಾರಣೆಯ ದಿನಾಂಕ ನಿಗದಿಯಾಗಲಿದೆ.

Leave a Reply

Your email address will not be published. Required fields are marked *

error: Content is protected !!