April 12, 2025

ಕಾರ್ಕಳ: ಅಗ್ನಿ ಶಾಮಕ ದಳದಿಂದ ಬಾವಿಗೆ ಬಿದ್ದ ಯುವಕನ ರಕ್ಷಣೆ

0

ಕಾರ್ಕಳ: ಅಜೆಕಾರು ಕೈಕಂಬ ಎಂಬಲ್ಲಿ ಬಾವಿಗೆ ಬಿದ್ದ ಯುವಕನೊಬ್ಬನನ್ನು ಕಾರ್ಕಳ ಅಗ್ನಿ ಶಾಮಕ ದಳವು ರಕ್ಷಿಸಿದ ಘಟನೆ ಫೆ.26ರ ಬೆಳಿಗ್ಗೆ‌ ನಡೆದಿದೆ.

ಸುಕುಮಾರ(40) ಎಂಬವರು ಬಾವಿಗೆ ಬಿದ್ದು ಜೀವಾಪಾಯದಿಂದ ಪಾರಾದವರು.

ಮಾಹಿತಿ ಪಡೆದ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಬಾವಿಯಿಂದ ಮೇಲೆಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿರುತ್ತಾರೆ. ಆಕಸ್ಮಿಕವಾಗಿ ಯುವಕ‌ ಬಿದ್ದಿರಬೇಕೆಂದು ಶಂಕಿಸಲಾಗಿದೆ.

 

 

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಬಿ ಎಂ ಸಂಜೀವ್, ದಪೆದರ್ ಅಚ್ಚುತ ಸಿಬ್ಬಂದಿಗಳಾದ ಚಂದ್ರಶೇಖರ್, ,ನಿತ್ಯಾನಂದ, ಸುಜಯ್, ಉಮೇಶ್, ವಿನಾಯಕ,ಸಂಜಯ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!