ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೋಡಿಯಲ್ಲಿ ಸಂಭ್ರಮದಿಂದ ಗಣರಾಜ್ಯೋತ್ಸವನ್ನು ಆಚರಿಸಿದ ವಿದ್ಯಾರ್ಥಿಗಳು, ಗುರುಗಳು ಹಾಗೂ ಹೆತ್ತವರು
ಕೆದಿಲ ಗ್ರಾಮದ ಪಾಟ್ರಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತೀ ಸಂಭ್ರಮದಿಂದ ವಿದ್ಯಾರ್ಥಿಗಳು, ಗುರುಗಳು, ವಿದ್ಯಾರ್ಥಿಗಳ ಹೆತ್ತವರ ಜೊತೆಯಲ್ಲಿ 74ನೇ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾಭಿವೃದಿ ಸಮಿತಿಯ ಅದ್ಯಕ್ಷರಾದ ಅಶ್ರಫ್ ತಾರಿಪಡ್ಪುರವರು ಧ್ವಜರೋಣಗೈದರು, ಮುಖ್ಯ ಗುರುಗಳಾದ ಶರಣಪ್ಪ ಸರ್, ಶಾಲಾಭಿವೃದಿ ಸಮಿತಿಯ ಉಪಾಧ್ಯಕ್ಷರಾದ ಬದ್ರುನಿಸ, ಸದಸ್ಯರಾದ ಜೊಹರ, ಕೈರುನಿಸ,ಕಾವೇರಿ, ಸರಸ್ವತಿ, ಹರೀಶ್ ಕುದ್ದುಂಬ್ಲಾಡಿ, ಅಬ್ದುಲ್ ರಜಾಕ್ (ಮೊನು) ರಫೀಕ್ ಮದನಿ, ಝಬೈರ್, ಬಸೀರ್, ಹಾಗು ಶಾಲಾಭಿವೃದಿ ಸಮಿತಿಯ ಮಾಜಿ ಅದ್ಯಕ್ಷರಾದ ಜಬ್ಬರ್ ಪಾಟ್ರಕೋಡಿ ಭಾಗವಹಿಸಿದರು.






