ಕೈಯಲ್ಲಿದ್ದ ಮೊಬೈಲ್ ಫೋನ್ ನಿಂದ ಹೊಡೆದು ಚಿರತೆ ದಾಳಿಯಿಂದ ಪಾರಾದ ಯುವಕ
ಮೈಸೂರು: ತಿ. ನರಸೀಪುರ ತಾಲೂಕು ಬನ್ನೂರಿನಲ್ಲಿ ಮತ್ತೆ ಚಿರತೆ ಅಟ್ಟಹಾಸ ಮೆರೆದಿದ್ದು, ಯುವಕನೋರ್ವನ ಮೇಲೆ ಎರಗಿ ಗಾಯಗೊಳಿಸಿರುವ ಘಟನೆ ಬನ್ನೂರಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸತೀಶ್ ಎಂಬಾತ ಭಾನುವಾರ ಸಂಜೆ ಜಮೀನಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ.
ಚಿರತೆ ಏಕಾಏಕಿ ದಾಳಿ ನಡೆಸಿದ್ದರಿಂದ ತನ್ನ ಬಳಿ ಇದ್ದ ಮೊಬೈಲ್ ಮೂಲಕ ಚಿರತೆಗೆ ಹೊಡೆದು ಸತೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಚಿರತೆ ಸ್ಥಳದಿಂದ ಪೇರಿ ಕಿತ್ತಿದೆ. ಗಾಯಗೊಂಡ ಸತೀಶ್ ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.