“ಕರೀಂನಗರ”ದ ಹೆಸರನ್ನು “ಕರಿನಗರ” ಎಂದು ಬದಲಿಸಿದ ಬಿಜೆಪಿ
ಹೈದರಾಬಾದ್: ವಸಾಹತುಶಾಹಿಯ ಕುರುಹುಗಳನ್ನು ಅಳಿಸಿಹಾಕುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ ಬಿಜೆಪಿ, ದೇಶದ ಪ್ರಮುಖ ನಗರಗಳು, ಸ್ಥಳಗಳ ಹೆಸರನ್ನು ಮರುನಾಮಕರಣಗೊಳಿಸಿದೆ.
ಇದರ ಮುಂದುವರಿದ ಭಾಗ ಎಂಬಂತೆ ತೆಲಂಗಾಣದ ದಿನಪತ್ರಿಕೆಗಳಲ್ಲಿ ಬಿಜೆಪಿ ನೀಡಿರುವ ಜಾಹೀರಾತಿನಲ್ಲಿ ಕರೀಂನಗರದ ಹೆಸರನ್ನು ಕರಿನಗರ ಎಂದು ಉಲ್ಲೇಖೀಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್, “ಇದು ಅಕ್ಷರ ದೋಷವಲ್ಲ. ಐತಿಹಾಸಿಕವಾಗಿ ನಗರದ ಹೆಸರು “ಕರಿನಗರ’ ಆಗಿದೆ. ಆದರೆ ನಿಜಾಮರು ಅದನ್ನು ಕರೀಂನಗರ ಎಂದು ಬದಲಾಯಿಸಿದರು,’ ಎಂದು ಹೇಳಿದರು.




