April 16, 2024

ತಮಿಳುನಾಡು: ಕಳ್ಳನನ್ನು ಮರಕ್ಕೆ ಕಟ್ಟಿ, ಥಳಿಸಿ ಕೊಂದ ಕಾರ್ಮಿಕರು: ಪ್ರಕರಣ ದಾಖಲು

0

ತಮಿಳುನಾಡು: ತಮಿಳುನಾಡಿನ ತಿರುಚ್ಚಿಯಲ್ಲಿ ಕಳ್ಳತನ ಮಾಡಲು ಬಂದ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಕಾರ್ಮಿಕರು ಥಳಿಸಿ ಕೊಂದು ಹಾಕಿರುವ ಘಟನೆ ನಡೆದಿದೆ.

ತಿರುಚ್ಚಿ-ಮದುರೈ ಹೆದ್ದಾರಿಯ ಮಣಿಗಂಡಂನಲ್ಲಿ ಆಶಾಪುರದ ಸಾಮಿಲ್‌ನಲ್ಲಿ ಕಳ್ಳನೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಗಿರಣಿ ಕಾರ್ಮಿಕರು ಹೊಡೆದು ಕೊಂದಿದ್ದಾರೆ.

ನೈಜೀರಿಯಾ ಮತ್ತು ಮ್ಯಾನ್ಮಾರ್‌ನಿಂದ ಉತ್ತಮ ಗುಣಮಟ್ಟದ ಮರವನ್ನು ಆಮದು ಮಾಡಿಕೊಳ್ಳುವ ಮತ್ತು ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಗರಗಸದ ಗಿರಣಿಯಲ್ಲಿ ವಿವಿಧ ರಾಜ್ಯಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅಸ್ಸಾಂನ ಮೂವರು ಕಾರ್ಮಿಕರು, ವ್ಯಕ್ತಿಯೊಬ್ಬ ಗರಗಸದ ಗಿರಣಿಯೊಳಗೆ ನುಗ್ಗುವುದನ್ನು ನೋಡಿದ್ದರು. ಅವರು ಆ ವ್ಯಕ್ತಿಯನ್ನು ಹಿಡಿದು ಕಳ್ಳತನದ ಆರೋಪ ಮಾಡಿ ಮರಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಆಪಾದಿತ ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಸ್ಥಳಕ್ಕೆ ಪೊಲೀಸರು ಬರುವ ಮುನ್ನಾ ವ್ಯಕ್ತಿ ಸಾವನ್ನಪ್ಪಿದ್ದನು ಎನ್ನಲಾಗುತ್ತಿದೆ.

ಘಟನೆ ಸಂಬಂಧ ಪೊಲೀಸರು ಅಸ್ಸಾಂ ಮೂಲದ ಮೂವರು ಕಾರ್ಮಿಕರು ಹಾಗೂ ಸಾಮಿಲ್ ಮಾಲೀಕ ಧೀರೇಂದರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!