September 19, 2024

ಕಾಸರಗೋಡು: ಕೆರೆಗೆ ಕಾಲು ಜಾರಿ ಬಿದ್ದು ಗೃಹಿಣಿ ಮೃತ್ಯು

0

ಕಾಸರಗೋಡು: ಗೃಹಿಣಿಯೊಬ್ಬರು ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಕೊಕ್ಕೆಚ್ಚಾಲ್ ಪೊನ್ನೆತ್ತೋಡು ಎಂಬಲ್ಲಿ ನಡೆದಿದೆ.

ಪೊನ್ನೆತ್ತೋಡಿನ ತಾರಾನಾಥ ಶೆಟ್ಟಿ ರವರ ಪತ್ನಿ ಅನಿತಾ ಶೆಟ್ಟಿ (42) ಮೃತಪಟ್ಟವರು.

ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅನಿತಾರವರನ್ನು ಸಂಬಂಧಿಕರು ಶೋಧ ನಡೆಸಿದಾಗ ಮನೆ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಈ ಬಗ್ಗೆ ಕುಂಬಳೆ ಪೊಲೀಸರು ಮಹಜರು ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!