August 14, 2026

ಮಂಗಳೂರು: ಸ್ಟೋಟ ಪ್ರಕರಣದ ಆರೋಪಿಗೆ ಚಿಕಿತ್ಸೆ ಮುಂದುವರೆದಿದೆ: ಆತನ ಜೊತೆ ಮಾತನಾಡಲು ಯಾರನ್ನೂ ಬಿಟ್ಟಿಲ್ಲ -ಕಮಿಷನರ್

0
IMG-20221126-WA0042.jpg

ಮಂಗಳೂರು: ನಗರದಲ್ಲಿ ನಡೆದ ಆಟೋರಿಕ್ಷಾದಲ್ಲಿ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಚಿಕಿತ್ಸೆ ಮುಂದುವರೆದಿದ್ದು, ಆತನ ಜೊತೆ ಮಾತನಾಡಲು ಯಾರನ್ನೂ ಬಿಟ್ಟಿಲ್ಲ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೋಟ ಪ್ರಕರಣದ ಆರೋಪಿ ಶಾರೀಕ್ ಆರೋಗ್ಯ ಸ್ಥಿತಿಯನ್ನು ಗಮನಿಸಲಾಗುತ್ತಿದ್ದು, ಚಿಕಿತ್ಸೆ ಮುಂದುವರೆದಿದೆ. ಆಟೋ ಡ್ರೈವರ್ ಪುರುಷೋತ್ತಮ ಪೂಜಾರಿ ಅವರ ಆರೋಗ್ಯ ಸ್ಥಿತಿ ಸುಧಾರಣೆಗೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದರು.

ಇನ್ನು ಆರೋಪಿಯು ಹೇಳಿಕೆ ಕೊಟ್ಟಿದ್ದಾನೆ, ಅವನಲ್ಲಿ ಟಾರ್ಗೆಟ್ಸ್ ಸಿಕ್ಕಿದೆ, ಕೆಲವರ ಹೆಸರು ಹೇಳಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿದ್ದು ಇದು ಎಲ್ಲವೂ ಸುಳ್ಳು ವದಂತಿಯಾಗಿದ್ದು, ಇಂತಹ ಸುದ್ದಿಗಳನ್ನು ಹಬ್ಬಿ ಸಾರ್ವಜನಿಕರಲ್ಲಿ ಗೊಂದಲದ ವಾತಾವರಣ ಸೃಷ್ಟಿಸಬಾರದು ಎಂದಿದ್ದಾರೆ.

ಆಸ್ಪತ್ರೆಯಲ್ಲಿ ಹೆಚ್ಚಿನ ಭದ್ರತೆ ಮಾಡಲಾಗಿದ್ದು, ಶಾರೀಕ್ ನನ್ನು ಯಾರಿಗೂ ಭೇಟಿ ಮಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!