March 20, 2026

ಉಚ್ಚಿಲದಲ್ಲಿ ಭೀಕರ ಅಪಘಾತ: ಮದುವೆ ನಿಶ್ಚಯವಾಗಿದ್ದ ಯುವತಿ ಮೃತ್ಯು- ಯುವಕ ಅಪಾಯದಿಂದ ಪಾರು

0
image_editor_output_image1282987488-1668616476977

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ರಿಕ್ಷಾ ನಿಲ್ದಾಣ ಬಳಿ ಟೆಂಪೋಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಯುವತಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತ ಪಟ್ಟ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಯುವಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ.

ಮೃತ ಯುವತಿಯನ್ನು ಪಡುಬಿದ್ರಿ ಕಂಚುನಡ್ಕದ ನಿವಾಸಿ ನಿಹಾಲ ಮತ್ತು ಗಾಯಗೊಂಡ ಯುವಕನನ್ನು ಬೆಳಪುವಿನ ಷರೀಫ್ ಎಂದು ಗುರುತಿಸಲಾಗಿದೆ.

ಅವರಿಗೆ ಮದುವೆ ನಿಶ್ಚಯವಾಗಿದ್ದು, ಉಡುಪಿ ಕಡೆಯಿಂದ ಅವರು ತಮ್ಮ ಪಲ್ಸರ್ ಬೈಕನ್ನಲ್ಲಿ ಬರುತ್ತಿದ್ದ ಸಂದರ್ಭ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಅವರಿಗೆ ಮದುವೆ ನಿಶ್ಚಯವಾಗಿದ್ದು, ಉಡುಪಿ ಕಡೆಯಿಂದ ಅವರು ತಮ್ಮ ಪಲ್ಸರ್ ಬೈಕನ್ನಲ್ಲಿ ಬರುತ್ತಿದ್ದ ಸಂದರ್ಭ ಹಿಂಬದಿಯಿಂದ ಬಂದ ಟಿಪ್ಪರ್ ನೇರವಾಗಿ ಡಿಕ್ಕಿ ಹೊಡೆದಿದೆ.

ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

You may have missed

error: Content is protected !!