ಕೆಎಸ್ಆರ್ಟಿಸಿ ಬಸ್ ಗೆ ವಿಮಾನದ ರೆಕ್ಕೆ ಡಿಕ್ಕಿ:ಹಲವರು ಗಾಯ
ತಿರುವನಂತಪುರಂ: ಟ್ರೇಲರ್ನಲ್ಲಿ ಸಾಗಿಸುತ್ತಿದ್ದ ವಿಮಾನದ ರೆಕ್ಕೆ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಹಲವರು ಗಾಯಗೊಂಡಿದ್ದಾರೆ.
ಬುಧವಾರ ಬೆಳಗ್ಗೆ ಬಲರಾಮಪುರಂ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಕೆಎಸ್ಆರ್ಟಿಸಿ ಬಸ್ ಚಾಲಕ ಸೇರಿದಂತೆ ಐದಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದ ನಂತರ ಹಲವಾರು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಟ್ರೇಲರ್ ವಿಮಾನದ ರೆಕ್ಕೆಗಳು ಮತ್ತು ಇತರ ಭಾಗಗಳನ್ನು ಹೈದರಾಬಾದ್ಗೆ ತೆಗೆದುಕೊಂಡು ಹೋಗುತ್ತಿತ್ತು. ಅಪಘಾತದಲ್ಲಿ ಬಸ್ಸಿನ ಮುಂಭಾಗವು ಸಂಪೂರ್ಣವಾಗಿ ಧ್ವಂಸಗೊಂಡಿದೆ. ಬಸ್ ಗೆ ಅಪ್ಪಳಿಸಿದ ವಿಮಾನವು ಏರ್ಬಸ್ A320 ಆಗಿದ್ದು, 2018 ರಿಂದ ತಿರುವನಂತಪುರಂ ವಿಮಾನ ನಿಲ್ದಾಣದ ಹ್ಯಾಂಗರ್ ಘಟಕದ ಬಳಿ 30 ವರ್ಷಗಳ ಹಾರಾಟದ ನಂತರ ನಿವೃತ್ತಿ ಹೊಂದಿತ್ತು. ಕಳೆದ ನಾಲ್ಕು ವರ್ಷಗಳಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ವಿಮಾನವನ್ನು ಅದರ ಕಾರ್ಯನಿರ್ವಹಣೆಯನ್ನು ಅಧ್ಯಯನ ಮಾಡಲು ಬಳಸುತ್ತಿದ್ದರು. ಇದನ್ನು ಹರಾಜಿಗೆ ಇಡಲಾಗಿದ್ದು, ಹೈದರಾಬಾದ್ ನಿವಾಸಿ ಜೋಗಿಂದರ್ ಸಿಂಗ್ ಅವರು 75 ಲಕ್ಷ ರೂಪಾಯಿಗೆ ವಿಮಾನವನ್ನು ಖರೀದಿಸಿದ್ದಾರೆ. ವಿಮಾನವನ್ನು ಕಿತ್ತು ನಾಲ್ಕು ಟ್ರೇಲರ್ಗಳಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು.




