ವಿಟ್ಲ ಆಟೋ ಚಾಲಕ-ಮಾಲಕ ಸಂಘದ ಗೌರವಾಧ್ಯಕ್ಷರಾಗಿ ಸಂದೇಶ್ ಶೆಟ್ಟಿ ಬಿಕ್ನಾಜೆ ಆಯ್ಕೆ
ವಿಟ್ಲ: ವಿಟ್ಲ ಆಟೋ ಚಾಲಕ ಮಾಲಕ ಸಂಘದ(R C M S) ಇದರ ಗೌರವಾಧ್ಯಕ್ಷರಾಗಿ ಸಂದೇಶ್ ಶೆಟ್ಟಿ ಬಿಕ್ನಾಜೆ ಅವರನ್ನು ಆಯ್ಕೆ ಮಾಡಲಾಯಿತು.
ತಾರೀಕು 19 9 2022ನೇ ಆದಿತ್ಯವಾರ ನಡೆದ ರಿಕ್ಷಾ ಚಾಲಕ ಮಾಲಕರ ಸಂಘದ ಸಭೆಯಲ್ಲಿ ಹೊಸ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಶ್ರೀ ಬಿ ಸಂದೇಶ್ ಶೆಟ್ಟಿ ಇವರನ್ನು ಗೌರವಾಧ್ಯಕ್ಷರಾಗಿ, ಮಾಡುವುದೆಂದು ತೀರ್ಮಾನಿಸಲಾಯಿತು.
ಅಧ್ಯಕ್ಷರಾಗಿ ಹರಿಣಾಕ್ಷ ರಾದು ಕಟ್ಟೆ, ಉಪಾಧ್ಯಕ್ಷರಾಗಿ ಮಾಧವ , ಬೆದ್ರಕಾಡು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಟಿ ಎಂ ಕೋಡಂಗಾಯಿ, ಹಾಗೂ ಕೋಶಾಧಿಕಾರಿಯಾಗಿ ನಾಗೇಶ್ ಪೂರ್ಲ ಪಾಡಿ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಕಡಂಬು,ಹಾಗೂ ಸುಮಾರು 50 ಜನರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಿಸಲಾಯಿತು.




