ಮೀನು ಹಿಡಿಯಲು ಹೋದ ತಂದೆ, ಮಗ ನೀರಿನಲ್ಲಿ ಸಿಲುಕಿ ಮೃತ್ಯು
ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ಜಲಾಶಯದಲ್ಲಿ ಮೀನು ಹಿಡಿಯಲು ಹೋದ ತಂದೆ ಮಗ ಜಲಾಶಯದಲ್ಲಿ ಸಿಲುಕಿ ಮೃತಪಟ್ಟಿದ್ದು, ಬುಧವಾರ ಮೃತದೇಹ ಪತ್ತೆಯಾಗಿದೆ.
ಚಂದ್ರಂಪಳ್ಳಿ ಗ್ರಾಮದ ರಾಜಪ್ಪ ತಿಮ್ಮಯ್ಯ (45) ಮತ್ತು ಆತನ ಮಗ ಮಹೇಶ್ (12) ಮೃತ ದುರ್ದೈವಿಗಳು.
ಮುಖ್ಯ ಕಾಲುವೆಯಲ್ಲಿ ಮಂಗಳವಾರ ಮುಂಜಾನೆ ಮೀನುಹಿಡಿಯಲು ಚಂದ್ರಂಪಳ್ಳಿ ಜಲಾಶಯಕ್ಕೆ ಹೋಗಿದ್ದರು. ಮಧ್ಯಾಹ್ನ ಆದರೂ ಮನೆಗೆ ಬಾರದೇ ಇರುವುದರಿಂದ ಆತನ ಇನ್ನೊಬ್ಬ ಮಗ ಊರಿನ ಜನರಿಗೆ ತಿಳಿದ್ದಾನೆ ಎಂದು ತಿಳಿದುಬಂದಿದೆ.




