ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ರನ್ನು ಭೇಟಿಯಾದ ಮುಸ್ಲಿಂ ಮುಖಂಡರ ನಿಯೋಗ
ಮಂಗಳೂರು: ಮುಖ್ಯಮಂತ್ರಿ ಜಿಲ್ಲಾ ಭೇಟಿ ಸಂದರ್ಭದಲ್ಲಿ ಉಂಟಾದ ತಾರತಮ್ಯ ವಿಚಾರ, ಪ್ರವೀಣ್ ತಂದೆಯ ಹೇಳಿಕೆ ಬಗ್ಗೆ ತನಿಖೆ ನಡೆಸದಿರುವ ಬಗ್ಗೆ ಇರುವ ಸಂಶಯ, ಅಮಾಯಕರ ಬಂಧನದ ಬಗ್ಗೆ ಇರುವ ಆತಂಕ ಸಮೇತ ಹಲವು ವಿಚಾರಗಳನ್ನು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ರವರಿಗೆ ವಿಧಾನಸಭೆ ವಿರೋಧ ಪಕ್ಷ ಉಪ ನಾಯಕ ಯು ಟಿ ಖಾದರ್ ಹಾಗೂ ಮಾಜಿ ಶಾಸಕ ಮೊಹ್ದಿನ್ ಬಾವ ಸಾನಿದ್ಯದಲ್ಲಿ ಕೆ ಅಶ್ರಫ್ ನೇತೃತ್ವದಲ್ಲಿ ವಿವಿಧ ಸಂಘಟನೆಯ ನಾಯಕರು ಸೇರಿ ಮನವಿ ನೀಡಲಾಯಿತು.


