ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಮರ ಬಿದ್ದು ಸಂಚಾರ ಸ್ಥಗಿತ: ಮರಗಳನ್ನು ತೆರವುಗೊಳಿಸಿದ ಅರಣ್ಯಾಧಿಕಾರಿಗಳು-ವಾಹನ ಸಂಚಾರ ಪ್ರಾರಂಭ
ಬೆಳ್ತಂಗಡಿ : ಚಾರ್ಮಾಡಿ ಘಾಟ್ ನ 8 ನೇ ತಿರುವಿನ ಬಳಿ ರಸ್ತೆಗೆ ಮರ ಹಾಗೂ ಮಣ್ಣು ಬಿದ್ದು ರಸ್ತೆ ಸಂಚಾರ ಬಂದ್ ಸ್ಥಳಕ್ಕೆ ಬೆಳ್ತಂಗಡಿ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ದೌಡಾಯಿಸಿ ಜೆಸಿಬಿ ಮೂಲಕ ಮರ ಮತ್ತು ಮಣ್ಣು ತೆರವು ಮಾಡಿದ್ದಾರೆ. ಸಂಚಾರ ಮುಕ್ತ ಮಾಡಿದ್ದಾರೆ. ಬೆಳಿಗ್ಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಾರ್ಯಾಚರಣೆ ಬಳಿಕ ಸುಗಮ ಸಂಚಾರಕ್ಕೆ ಅನುಮಾಡಿಕೊಡಲಾಗಿದೆ



