September 20, 2024

ಸುಳ್ಯ: ದಲಿತರ ಬಾಹುಗಳಲ್ಲಿ ಇರುವುದು ಪೌಷ್ಟಿಕವಾದ ದನದ ಮಾಂಸ ತಿಂದ ಆಹಾರ ಹೇಳಿಕೆಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಖಂಡನೆ

0

ಸುಳ್ಯ: ಇತ್ತೀಚೆಗೆ ಮಂಗಳೂರು ಸಮೀಪದ ಕಣ್ಣೂರಿನಲ್ಲಿ ನಡೆದಂತಹ ಎಸ್ ಡಿ ಪಿ ಐ ಜನಾಧಿಕಾರ ಸಭೆಯಲ್ಲಿ ಎಸ್ ಡಿ ಪಿ ಐ ಮುಖಂಡ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಜಲ್ ಕೊಡ್ಲಿಪೇಟೆ ಎಂಬವರು ತಮ್ಮ ಭಾಷಣದಲ್ಲಿ ಮಾತನಾಡುತ್ತಾ ದಲಿತರ ಬಾಹುಗಳಲ್ಲಿ ಇರುವುದು ಪೌಷ್ಟಿಕವಾದ ದನದ ಮಾಂಸ ತಿಂದ ಆಹಾರ ಎಂದು ಹೇಳಿದ್ದು ಈ ಮಾತನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಖಂಡಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಮಾತನಾಡಿರುವ ಅವರು ದನದ ಮಾಂಸ ತಿನ್ನದ ದಲಿತರು ಇಂತಹ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ ಧಾರ್ಮಿಕ ವಿಚಾರದಲ್ಲಿ. ದಲಿತ ವರ್ಗದವರು ಹೆಚ್ಚು ಆರಾಧನೆ ಮಾಡುವುದರಿಂದ ದನದ ಮಾಂಸ ತಿನ್ನಲು ಹಿಂದೇಟು ಹಾಕುವ ಸಂದರ್ಭದಲ್ಲಿ ಈ ವ್ಯಕ್ತಿ ನೀಡಿರುವ ಹೇಳಿಕೆಯಿಂದ ನಮಗೆ ತುಂಬಾ ನೋವಾಗಿದೆ ಆದ್ದರಿಂದ ಈ ರೀತಿಯ ಹೇಳಿಕೆಯನ್ನು ನೀಡಿರುವ ಎಸ್ ಡಿಪಿಐ ಮುಖಂಡ ಅಫ್ಜಲ್ ಕೊಡ್ಲಿಪೇಟೆ ಎಂಬವರು ಕ್ಷಮೆಯಾಚನೆ ಮಾಡಬೇಕು ಮತ್ತು ದಲಿತರು ಯಾರ ಗುಲಾಮರು ಅಲ್ಲ ಹಾಗಾಗಿ ಇನ್ನು ಮುಂದೆ ನಡೆಯುವ ಯಾವುದೇ ಸಭೆ ಸಮಾರಂಭದಲ್ಲಿ ಈ ರೀತಿಯ ಅವಹೇಳನಕಾರಿ ನಿಂದನೆಗಳನ್ನು ಯಾರು ಮಾಡಬಾರದು ಮತ್ತು ನಾವು ಯಾವ ಪಕ್ಷದ ಗುಲಾಮರು ಅಲ್ಲ ಇನ್ನು ಮುಂದೆ ದಲಿತರ ಬಗ್ಗೆ ಈ ರೀತಿಯ ಅವಹೇಳನಕಾರಿ ಭಾಷಣ ಮಾಡಿದರೆ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!