September 20, 2024

ಕಾಲ್ನಡಿಗೆ ಮೂಲಕ ಹಜ್ಜ್ ಯಾತ್ರೆಗೆ ಹೊರಟ ಶಿಹಾಬ್ ರವರನ್ನು ವಡಗರ ದಲ್ಲಿ ಭೇಟಿಯಾಗಿ ಶುಭ ಹಾರೈಸಿದ ಹಸೈನಾರ್ ಕಲ್ಲುಗುಂಡಿ

0

ಕಣ್ಣೂರು: ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ನಿವಾಸಿ ಶಿಹಾಬ್ ಎಂಬುವವರು ಮುಸಲ್ಮಾನ ಬಾಂಧವರ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಕಾಲ್ನಡಿಗೆಯ ಮೂಲಕ ಯಾತ್ರೆಯನ್ನು ಕಳೆದ 3 ದಿನಗಳ ಹಿಂದೆ ತೊಡಗಿಕೊಂಡಿದ್ದಾರೆ.

ಇವರ ಯಾತ್ರೆಗೆ ಜೆಡಿಎಸ್ ಪಕ್ಷದ ಮುಖಂಡ ಸುಳ್ಯದ ಕಲ್ಲುಗುಂಡಿ ನಿವಾಸಿ ಹಸೈನಾರ್ ಎ ಕೆ ರವರು ಕೇರಳದ ವಡಗರ ಪ್ರದೇಶದಲ್ಲಿ ಭೇಟಿಯಾಗಿ ಯಾತ್ರೆಗೆ ಶುಭ ಹಾರೈಸಿದ್ದಾರೆ.
ಶಿಹಾಬ್ ರವರು ಸುಮಾರು 8640 ಕಿಲೋಮೀಟರ್ ರಸ್ತೆಯನ್ನು ಸುಮಾರು 284 ದಿನಗಳಲ್ಲಿ ಪೂರೈಸಲಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!