ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ತಪ್ಪಿಸಿಕೊಂಡಿದ್ದ ಕೈದಿಯನ್ನು 24 ಗಂಟೆಯೊಳಗೆ ಬಂಧಿಸಿದ ಪೊಲೀಸರು
ಚಿಕ್ಕಮಗಳೂರು : ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಗೆ ದಾಖಲಾಗಿದ್ದ ವೇಳೆ ತಪ್ಪಿಸಿಕೊಂಡಿದ್ದ ಕೈದಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿದ್ದ ಕಡೂರು ಮೂಲದ ಧನರಾಜ್, ಜೈಲು ಸಿಬ್ಬಂದಿಯನ್ನ ಆಸ್ಪತ್ರೆ ಶೌಚಾಲಯದೊಳಗೆ ತಳ್ಳಿ ತಪ್ಪಿಸಿಕೊಂಡಿದ್ದ.
ಜೈಲು ಸಿಬ್ಬಂದಿಗಳು ಮತ್ತು ಕಡೂರು ಪಿಎಸ್ ಐ ರಮ್ಯಾ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶಿವಮೊಗ್ಗ ತಾಲೂಕಿನ ಕುಂಸಿ ಬಳಿ ಬಂಧಿಸಿದ್ದಾರೆ.




