ಮೂಡಿಗೆರೆ: ಕಾರು ಅಪಘಾತ ತಪ್ಪಿಸಲು ಹೋಗಿ ಪಿಕಪ್ ವಾಹನ ಪಲ್ಟಿ
ಮೂಡಿಗೆರೆ: ಕಾರು ಅಪಘಾತ ತಪ್ಪಿಸಲು ಹೋಗಿ ಹಂದಿಗಳನ್ನು ಹೊತ್ತ ವಾಹನವೊಂದು ಪಲ್ಟಿಯಾಗಿ 10 ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿರುವ ಘಟನೆ ಬಾಳೂರಿನ ವಾಟೇಖಾನ್ ಕಲ್ಲಕ್ಕಿ ಬಳಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯಲ್ಲಿ ಕಾರು ಅಪಘಾತವನ್ನು ತಪ್ಪಿಸಲು ಹೋಗುವ ವೇಳೆ ಹಂದಿಗಳನ್ನು ಹೊತ್ತು ಸಾಗುತ್ತಿದ್ದ ಪೀಕಪ್ ವಾಹನ ಪಲ್ಟಿಯಾಗಿದ್ದು, ವಾಹನದಲ್ಲಿದ್ದ 10 ಕ್ಕೂ ಹೆಚ್ಚು ಹಂದಿಗಳು ಸ್ಥಳದಲ್ಲೇ ಸಾವನ್ನಪ್ಪಿದೆ.




