ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣ: 4 ವರ್ಷದ ಬಳಿಕ ಮತ್ತೋರ್ವ ಆರೋಪಿಯ ಬಂಧನ
ಉಳ್ಳಾಲ: ನಾಲ್ಕು ವರ್ಷಗಳ ಹಿಂದೆ ಜೆಪ್ಪು ಕುಡ್ಪಾಡಿಯಲ್ಲಿ ನಡೆದ ಟಾರ್ಗೆಟ್ ಇಲ್ಯಾಸ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (28) ಬಂಧಿತ ಆರೋಪಿಯಾಗಿದ್ದಾನೆ.
ಕೆಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್ ಟಾರ್ಗೆಟ್ ಇಲ್ಯಾಸ್ 2018ರ ಜನವರಿ 13ರಂದು ಜೆಪ್ಪು ಕುಡ್ಪಾಡಿಯ ತನ್ನ ಫ್ಲಾಟ್ನಲ್ಲಿ ಹತ್ಯೆಗೀಡಾಗಿದ್ದ.




