March 23, 2026

ಸಮಾನತೆ ಕಾಣಬೇಕಾದರೆ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಂದ ದೇವರ ಫೋಟೊಗಳನ್ನು ತೆಗೆಯಿರಿ: ನಟ ಚೇತನ್

0
Screenshot_2022-02-10-11-27-47-20_680d03679600f7af0b4c700c6b270fe7.jpg

ಬೆಂಗಳೂರು: ಸಮವಸ್ತ್ರದಲ್ಲಿ ಸಮಾನತೆ ಕಾಣಬೇಕು ಎಂಬ ಒತ್ತಾಯದಂತೆ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಿಂದ ದೇವರ ಚಿತ್ರಗಳನ್ನು ತೆಗೆದು ತಮ್ಮ ತಮ್ಮ ಮನೆಗೆ ವರ್ಗಾಯಿಸಿ ಎಂದು  ನಟ ಚೇತನ್ ಹೇಳಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು,  ಸರ್ಕಾರಿ ಶಾಲಾ ಸಮವಸ್ತ್ರದಲ್ಲಿ ಹಿಜಾಬ್ ,  ಟರ್ಬನ್ ಅಥವಾ ಯಾವುದೇ ಧಾರ್ಮಿಕ ಗುರುತುಗಳನ್ನು ತೆಗೆದುಹಾಕುವುದರ ಜೊತೆಗೆ, ಜಾತ್ಯಾತೀತ ಕನ್ನಡಿಗರಾದ ನಾವು ಸರ್ಕಾರಿ ಶಾಲೆಗಳು ,  ಕಚೇರಿಗಳು , ಬ್ಯಾಂಕುಗಳು , ಪೊಲೀಸ್ ಠಾಣೆಗಳು , ಆಸ್ಪತ್ರೆಗಳು , ಇತ್ಯಾದಿಗಳಿಂದ ಎಲ್ಲಾ ಧಾರ್ಮಿಕ ಭಾವಚಿತ್ರಗಳನ್ನು ತೆಗೆಯಬೇಕೆಂದು ಹೇಳ ಬಯಸುತ್ತೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!