ಕಂಬಳಬೆಟ್ಟು ಸ.ಹಿ.ಪ್ರಾ.ಶಾಲೆಯ ದಾಖಲಾತಿ ಆಂದೋಲನ
ಸ.ಹಿ.ಪ್ರಾ.ಶಾಲೆ ದಾಖಲಾತಿ ಆಂದೋಲನ ಈ ದಿನ ಶಾಂತಿನಗರ ದರ್ಬಾರ್ ಕಾಂಪ್ಲೆಕ್ಸ್ ಮುಂಬಾಗದಲ್ಲಿ ಶಾಲಾ ವಿದ್ಯಾವರ್ಧಕ ಸಮಿತಿಯ ಅಧ್ಯಕ್ಷರಾದ ಕೆಎಸ್ ಅಬ್ದುಲ್ ಹಮೀದ್.ರವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಕಂಬಳಬೆಟ್ಟು ಸ.ಹಿ.ಪ್ರಾ ಶಾಲಾ ಮುಖ್ಯ ಗುರುಗಳಾದ ಸುರೇಶ್ ನಾಯಕ್ ಸರಕಾರಿ ಶಾಲೆಗಳ ಮಹತ್ವದ ಬಗ್ಗೆ ತಿಳಿಯ ಪಡಿಸಿದರು . ಕಂಬಳಬೆಟ್ಟು ಶಾಲೆಯ ಸಹ ಶಿಕ್ಷಕಿ ಶ್ರೀಪತಿ ನಾಯಕ್ ಡಿ ಸರ್ವರನ್ನು ಸ್ವಾಗತಿಸಿ ವಂದಿಸಿದರು.
ಸಹಶಿಕ್ಷಕರಾದ ಅಕ್ಷತಾ ಟಿ ನಿರೂಪಣೆಗೈದರು. ಶಿಕ್ಷಕರಾದ ಜಯಪ್ರಭಾ ಕೆ,ನಿಹಾನ ವಿಟ್ಲ ಪಂಚಾಯತ್ ಸದಸ್ಯರಾದ ಸಿದ್ದೀಕ್ ಎಸ್ ಆರ್ ಶಾಳಾ ವಿದ್ಯಾವರ್ಧಕ ಸಮಿತಿಯ ಕಾರ್ಯದರ್ಶಿ ಅಬ್ದುಲ್ ಸತ್ತಾರ್,ಹಿರಿಯರಾದ ಅಬ್ದುಲ್ ಖಾದರ್ ಸುನ್ನಿ ಅಬ್ಬಾಸ್ ಕಂಬಳಬೆಟ್ಟು,ಹಮೀದ್ ಅಮ್ಮು, ನೌಶಾದ್ ಉರಿಮಜಲು,ಯಾಸೀರ್ ಸುನ್ನಿ ಹಾಗೂ ಎಸ್ ಡಿಎಂಸಿ ಸದಸ್ಯರು,ಪೋಷಕರು ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.





