ಗುಂಡ್ಯ: ಬೆಂಗಳೂರಿಗೆ ಮಗುವನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ದಾರಿ ಬಿಡದೇ ಸತಾಯಿಸಿದ ಕಾರು ಚಾಲಕ: ಕಾರು ಚಾಲಕನಿಗೆ 6 ಸಾವಿರ ರೂ. ದಂಡ ವಿಧಿಸಿದ ಪೊಲೀಸರು
ಉಪ್ಪಿನಂಗಡಿ: ದಿನಾಂಕ 29-09-25 ರಂದು ಬೆಂಗಳೂರಿನಿಂದ ಮಂಗಳೂರಿಗೆ ಕೆಎಂಸಿ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಮಗುವನ್ನು ಕರೆದುಕೊಂಡು ಬರುತ್ತಿರುವಾಗ ಗುಂಡ್ಯ ಬಳಿ ತಲುಪಿದಾಗ ಮುಂದೆಯಿಂದ ಹೋಗುತ್ತಿದ್ದ ಕಾರು ಒಂದು ಆಂಬುಲೆನ್ಸ್ ಗೆ ದಾರಿ ಮಾಡಿಕೊಡದೆ ಅಡ್ಡ ಅಡ್ಡಪಡಿಸಿರುತ್ತಾರೆ ಎಂದು ದೂರದಾರರಾದ ಆಂಬುಲೆನ್ಸ್ ಚಾಲಕ ಅನೀಫ್ ಎಂಬುವರು ನೀಡಿದ ದೂರಿನಂತೆ ದೂರಾರ್ಜಿ ಸ್ವೀಕರಿಸಿಕೊಂಡು ಅಡ್ಡಿಪಡಿಸಿದ ಕೆಎ 21 ಸಿ 6687 ಕಾರಿಗೆ 6000 ರೂಪಾಯಿ ದಂಡ ವಿಧಿಸಿರುವುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


