ಕಬಕ: ಬೈಕ್ ಮತ್ತು ಬಸ್ ನಡುವೆ ಅಪಘಾತ: ಸವಾರನಿಗೆ ಗಾಯ
ಕಬಕ: ಕಾಯರ್ಬಲ್ಲಿ ಸಮೀಪ ಬಸ್ -ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಪುತ್ತೂರಿನಿಂದ ಕಬಕ ಕಡೆಗೆ ತೆರಳುತಿದ್ದ ಬೈಕ್ ಹಾಗೂ ಮಂಗಳೂರಿನಿಂದ ಮೈಸೂರ್ಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪರಸ್ಪರ ಢಿಕ್ಕಿಯಾಗಿ ಬೈಕ್ ಸವಾರ ಕೃಷ್ಣನಗರ ರಾಮಾಮೂರ್ತಿಯವರ ಮಗ ಕೌಶಿಕ್ (28) ರವರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದಾರೆ.
ಗಾಯಳುವನ್ನು ಪುತ್ತೂರು ಮಾಹಾವೀರ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸಿದರು.




