ಉಳ್ಳಾಲದ ಜಲ್ಲಿಗುಡ್ಡೆ ನಿವಾಸಿ, ದೇಹದಾರ್ಡ್ಯ ಪಟು ಹೃದಯಾಘಾತದಿಂದ ಸಾವು
ಉಳ್ಳಾಲ: ದೇಹದಾರ್ಡ್ಯ ಪಟು ಹಾಗೂ ಭಾರತ್ ಕಿಶೋರ್ ಟೈಟಲ್ ವಿಜೇತ, ರೈಲ್ವೇ ಇಲಾಖೆಯ ಉದ್ಯೋಗಿ ಹೃದಯಾಘಾತದಿಂದ ಹುಬ್ಬಳ್ಳಿಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಉಳ್ಳಾಲದ ಜಲ್ಲಿಗುಡ್ಡೆಯ ನಿವಾಸಿ ಸಂತೋಷ್ ಕುಮಾರ್ (52) ಸಾವನ್ನಪ್ಪಿದವರು. ಮೃತ ವ್ಯಕ್ತಿಯು ತೊಕ್ಕೊಟ್ಟುವಿನ ಶಕ್ತಿಭಾರತ್ ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆದಿದ್ದರು.
ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಕರ್ನಾಟಕ ಉದಯ್ ಮತ್ತು ಭಾರತ್ ಕಿಶೋರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗಳಿಸಿದ್ದರು.




