ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಬಸವ ಸಾವು
ಮೂಲ್ಕಿ : ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಬಸವ ಕೃಷ್ಣ(18) ಇಂದು ಬೆಳ್ಳಿಗ್ಗೆ ಮೃತಪಟ್ಟಿದೆ.
ಶ್ರೀ ದೇವಳದ ಜಾತ್ರಾ ಮಹೋತ್ಸವ ಸಹಿತ ಬಲಿ ಉತ್ಸವಗಳಲ್ಲಿ ಭಾಗಿಯಾಗುತ್ತಾ ಸದೃಢ ಶರೀರದ ಕೃಷ್ಣ ಕಳೆದ 8 ದಿನಗಳಿಂದ ಆಹಾರ ಸೇವಿಸದೆ, ಮಲಮೂತ್ರ ವಿಸರ್ಜಿಸದೆ ಇದ್ದ ಕಾರಣ ಸ್ಥಳೀಯ ಪಶು ವೈದ್ಯ ಡಾ.ಪ್ರಸನ್ನ ಚಿಕಿತ್ಸೆ ನೀಡಿದ್ದರು. ವಾರ ಕಳೆದರೂ ಸಮಸ್ಯೆ ಪರಿಹಾರವಾಗದ ಕಾರಣ ವೈದ್ಯರ ಸಲಹೆಯಂತೆ ಕೃಷ್ಣನನ್ನು ಮಂಗಳೂರು ಪಶು ಅಸ್ಪತ್ರೆಗೆ ದಾಖಲಿಸಲಾಗಿತ್ತು.





