ವಿಟ್ಲ: ಪಿಕಪ್ ಚಾಲಕ ರಹ್ಮಾನ್ ಹತ್ಯೆ ಪ್ರಕರಣ: ವಿಟ್ಲದ ಮುಸ್ಲಿಂ ವರ್ತಕರಿಂದ ಸ್ವಯಂ ಪ್ರೇರಿತ ಬಂದ್
ವಿಟ್ಲ: ಪಿಕಪ್ ಚಾಲಕ ರಹೀಮ್ ಅವರ ಹತ್ಯೆಯನ್ನು ಖಂಡಿಸಿ ವಿಟ್ಲದ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟು ಬಂದ್ ಮಾಡಿ, ಘಟನೆಯನ್ನು ಖಂಡಿಸಿದ್ದಾರೆ.
ಇಂದು ಬೆಳಿಗ್ಗೆನಿಂದಲೇ ಮುಸ್ಲಿಂ ವರ್ತಕರು ಅಂಗಡಿಗಳ ಬಾಗಿಲು ತೆರೆದಿಲ್ಲ. ಎಲ್ಲರೂ ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟು ಬಂದ್ ಮಾಡಿದ್ದಾರೆ. ವಿಟ್ಲದ ಮೇಗಿನಪೇಟೆ, ರೀಹಾ ಪ್ಲಾನೆಟ್, ಎಂಪೈರ್ ಮಾಲ್, ಸ್ಮಾರ್ಟ್ ಸಿಟಿ ಭಾಗದಲ್ಲಿ ಹೆಚ್ಚಿನ ಮುಸ್ಲಿಂ ವರ್ತಕರ ಅಂಗಡಿಗಳಿದ್ದು, ಬಂದ್ ನಿಂದ ಬಿಕೋ ಎನ್ನುತ್ತಿದೆ.




