February 12, 2025

ಕಾಪು: ಟಿಪ್ಪರ್, ಕಾರಿನ ನಡುವೆ ಅಪಘಾತ: ಟಿಪ್ಪರ್ ನಿಂದ ಹೊರಗೆ ಹಾರುವ ವೇಳೆ ಟಿಪ್ಪರ್ ನಡಿಗೆ ಬಿದ್ದು ಚಾಲಕ ಸಾವು

0

ಕಾಪು: ಟಿಪ್ಪರ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಟಿಪ್ಪರ್ ನಿಂದ ಹೊರಗೆ ಹಾರುವ ವೇಳೆ ಟಿಪ್ಪರ್ ನಡಿಗೆ ಬಿದ್ದು ಚಾಲಕ ಸಾವನಪ್ಪಿದ ಘಟನೆ ಕಾಪು ತಾಲೂಕಿನ ಶಂಕರಪುರ ದುರ್ಗಾ ನಗರ ಎಂಬಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಮೃತ ಚಾಲಕ ಕೃಷ್ಣ ಎಂದು ಗುರುತಿಸಲಾಗಿದೆ. ಶಿರ್ವ ಕಡೆಯಿಂದ ಕಟಪಾಡಿ ಕಡೆಗೆ ಬರುತ್ತಿದ್ದ ಟಿಪ್ಪರ್ ಶಂಕರಪುರ ದುರ್ಗಾ ನಗರ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಟಿಪ್ಪರ್ ಮಗುಚಿಬಿದ್ದಿದ್ದು ಈ ವೇಳೆ ಟಿಪ್ಪರ್ ನಿಂದ ಹೊರಕ್ಕೆ ಹಾರಲು ಚಾಲಕ ಪ್ರಯತ್ನಿಸಿದ್ದು ದುರಾದೃಷ್ಟವಶಾತ್ ಟಿಪ್ಪರ್ ನ ಅಡಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

 

 

Leave a Reply

Your email address will not be published. Required fields are marked *

error: Content is protected !!